You are currently viewing ಪಾಲಿಟಿಕ್ಸ್ ಗೇಮ್  : “ಬಿಜೆಪಿಗೆ ಟಾಟಾ ಹೇಳಿ, ಕಾಂಗ್ರೆಸ್ ಗೆ ಜೈ” ಅಂತಾರಾ, ಬಿಜೆಪಿ ಹಿರಿಯ ನಾಯಕ ಬಸಲಿಂಗಪ್ಪ ಭೂತೆ..?

ಪಾಲಿಟಿಕ್ಸ್ ಗೇಮ್ : “ಬಿಜೆಪಿಗೆ ಟಾಟಾ ಹೇಳಿ, ಕಾಂಗ್ರೆಸ್ ಗೆ ಜೈ” ಅಂತಾರಾ, ಬಿಜೆಪಿ ಹಿರಿಯ ನಾಯಕ ಬಸಲಿಂಗಪ್ಪ ಭೂತೆ..?

ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಹಾಗೂ ಯಲಬುರ್ಗಾ ಪಟ್ಟಣದ ಹಿರಿಯ ನಾಯಕ ಮತ್ತು ಈ ಹಿಂದೆ ಬಿಜೆಪಿ ಗೆಲುವಿಗಾಗಿ ದುಡಿದು ಬಿಜೆಪಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಪಂಚಮಸಾಲಿ ಸಮಾಜದ ಮುಖಂಡ ಬಸಲಿಂಗಪ್ಪ ಭೂತೆ ಬಿಜೆಪಿಗೆ ಬಾಯ್ ಕಾಂಗ್ರೆಸ್ ಜೈ ಅಂತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿಯಗಾಗಿ ದುಡಿದ ಹಾಗೂ ಯಲಬುರ್ಗಾ ಕ್ಷೇತ್ರದ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದ, ಯಲಬುರ್ಗಾ ಪಟ್ಟಣದ ಬಸಲಿಂಗಪ್ಪ ಭೂತೆಯವರು ಬಿಜೆಪಿಯ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಅವರಿಗೆ ಟಿಕೆಟ್ ಸಿಗದೆ ಇರುವುದು ಹಾಗೂ ಬಿಜೆಪಿಯಲ್ಲಿ ಸರಿಯಾದ ಸ್ಥಾನಮಾನ ಸಿಗದ ಹಿನ್ನಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಇಲ್ಲಿನ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಇಂದು ಮಾಜಿ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ಯಲಬುರ್ಗಾ ಪಟ್ಟಣದ ಭೂತೆಯವರ ನಿವಾಸದಲ್ಲಿ ಔಪಚಾರಿಕವಾಗಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಆಗಮಿಸುವಂತೆ ಕೋರಿದ್ದರು ಎನ್ನಲಾಗಿದೆ. ಬಸಲಿಂಗಪ್ಪ ಭೂತೆಯವರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರುವ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿದು ಬಂದಿದೆ.

ಬಸಲಿಂಗಪ್ಪ ಭೂತೆಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರಾ? ಎಂದು ಕಾದು ನೋಡಬೇಕಿದೆ. ಈ ಕುರಿತು ಅವರು ಏನು ಪ್ರತಿಕ್ರಿಯೇ ನೀಡುತ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

Prajavikshane

Chandru R Bhanapaur

Leave a Reply

error: Content is protected !!