LOCAL NEWS : ಸಾಹಿತ್ಯದ ಸೊಬಗಿನಲ್ಲಿ ಕುಕನೂರು ಮುಂಚೂಣಿ : ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ
ಕುಕನೂರು : ಕಲ್ಯಾಣ ಚಾಲುಕ್ಯರ ನಾಡಗಿರುವ ಕುಂತಳಪುರ ಈಗಿನ ಕುಕನೂರು ತಾಲೂಕು ಪ್ರದೇಶದಲ್ಲಿ ಚುಟುಕುಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೊಬಗಿನಲ್ಲಿ ಇತ್ತೀಚಿಗೆ ಮತ್ತಷ್ಟು ವೈಭವ ಕಾಣುತ್ತಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.
ಪಟ್ಟಣದ ಇಟಗಿ ಭೀಮಾಂಭಿಕಾ ದೇವಸ್ಥಾನ ಆವರಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಚುಟುಕು ಗೋಷ್ಠಿ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕುರಿತು ಸಾಕಷ್ಟು ಸಂಘ, ಸಂಸ್ಥೆಗಳು ಚಟುವಟಿಕೆಯಲ್ಲಿವೆ ಇವುಗಳ ಜೊತೆಗೆ ಕಳೆದ ಮೂರೂ ದಶಕಗಳಿಂದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಡಾ ಎಂ ಜಿ ಆರ್ ಅರಸು ನೇತೃತ್ವದಲ್ಲಿ ವಿಭಿನ್ನವಾಗಿ ತನ್ನದೇ ಅದ ಕನ್ನಡ ಸೇವೆಯ ನಿರ್ವಹಿಸುತ್ತಿದೆ. ಚುಟುಕು ಸಾಹಿತ್ಯದ ಪರಂಪರೆ, ಕಾವ್ಯ, ಕೃತಿಗಳ ಮೂಲಕ ಸಾಹಿತ್ಯ ದ ವಾತಾವರಣ ಪಸರಿಸಿ ಚುಟುಕು ಸಾಹಿತ್ಯ ನಾಡಿನಲ್ಲಿ ಶ್ರೀಮಂತಗೊಂಡಿದೆ ಎಂದು ಹೇಳಿದರು.
ಚುಟುಕು ಕವಿಗಳು ಸಾಹಿತ್ಯದಲ್ಲಿ ಬದುಕಿನ ವಿಡಂಬನೆ, ವಿಪರ್ಯಾಸಗಳ ಬಣ್ಣನೆಯ ಮೂಲಕ ಸಾಮಾಜಿಕ ಕಳಕಳಿ, ಜವಾಬ್ದಾರಿ ಮೆರೆಯುತ್ತಾರೆ. ಹಾಸ್ಯದ ಲೇಪನಕೊಟ್ಟು ನಗಿಸುತ್ತಾರೆ, ಹೃದಯ ದಹಿಸುವ ಅನೇಕ ಸತ್ಯಗಳನ್ನು ಕೇವಲ ನಾಲ್ಕು ಸಾಲಿನಲ್ಲಿ ಕಟ್ಟಿಕೊಡುತ್ತಾರೆ ಗಟ್ಟಿತನ ಸಾಹಿತ್ಯಕೆ ಚುಟುಕು ಸಾಹಿತ್ಯ ಪ್ರಮುಖ ಎಂದರು. ಯುವ ಪೀಳಿಗೆ ಸಾಮಾಜಿಕ ಅಂಕು ಡೊಂಕು ತಿದ್ದಲು ಚುಟುಕು ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ನೌಕರ ಸಂಘದ ಅಧ್ಯಕ್ಷ ಮಹೇಶ್ ಸಬರದ್ ಮಾತನಾಡಿ, ತಾಲೂಕಿನ ಅನೇಕ
ಪ್ರತಿಭೆಗಳು ಚುಟುಕು ಶ್ರೀಮಂತಗೊಳಿಸಿದ್ದಾರೆ. ಈಗಿನ ಬಿಡುವಿಲ್ಲದ ಜೀವನ ಶೈಲಿಗೆ ಚುಟುಕು ಸಾಹಿತ್ಯ ಪ್ರಕಾರಗಳು ಜನರಿಗೆ ಹಿಡಿಸಿವೆ. ಚಿಕ್ಕ ಮತ್ತು ಚೊಕ್ಕದಾದ ರೀತಿಯಲ್ಲಿ ಸಾಮಾಜಿಕ ಬದಲಾವಣೆ ತರುತ್ತಿವೆ ಎಂದು ಹೇಳಿದರು.
ಕಲಾವಿದ ಮುರಾರಿ ಬಜೇಂತ್ರಿ ,ಖಾದರ ಸಾಬ್ , ಮೇಘರಾಜ ಜಿಡಗಿ ಅವರಿಂದ ಸಂಗೀತ ಸುಧೆ ಗಾಯನ ಪ್ರಸ್ತುತ ಪಡಿಸಲಾಯಿತು .
ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಇದೇ ಸಂದರ್ಭದಲ್ಲಿ 20 ಕ್ಕೂ ಅಧಿಕ ಕವಿಗಳು ತಮ್ಮ ಕವಿತೆ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ್ ಉಪ್ಪಿನ್ ವಹಿಸಿದ್ದರು. ಸಾಹಿತಿ ಗಂಗಾಧರ ಅವಟೇ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಆರ್. ಪಿ. ರಾಜೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ್ ನೇಲಾ ಗಣಿ, ಶರಣಪ್ಪ ರಾವಣಕಿ, ಶರಣಪ್ಪ ಕೊಪ್ಪದ್, ಉಮೇಶ್ ಕಂಬಳಿ, ಶಂಭು ಅರಿಶಿಣದ, ಮಾರುತೆಷ ತಳವಾರ್,ಸಾಹಿತಿಗಳಾದ ಶಿವಮೂರ್ತಿ ಇಟಗಿ, ಅಕ್ಕಮ್ಮ ಅಂಗಡಿ, ಮಹೇಶ ಹಡಪದ, ಈರಯ್ಯ ಕುರ್ತಕೋಟಿ, ಕಲ್ಲಪ್ಪ ಕವಳಕೇರಿ ಇತರರು ಉಪಸ್ಥಿತರಿದ್ದರು. ಕು. ರಾಣಿ ಹಳ್ಳಿ , ಆನಂದ ಹೊಟ್ಟೆ ಅವರು ಕಾರ್ಯಕ್ರಮ ವನ್ನು ನಿರೂಪಣೆ ಮಾಡಿದರು. ರಾಮಕೃಷ್ಣ ತಳವಾರ ಸ್ವಾಗತಿಸಿದರು. ರಾಮಚಂದ್ರ ಹಣಗಿ ವಂದಿಸಿದರು.