ಪ್ರಜಾ ವೀಕ್ಷಣೆ ಸುದ್ದಿ :
LOCAL EXPRESS : ಬೃಹತ್ ಪ್ರತಿಭಟನೆ : ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಕೊಲಂಭೋ ಸಮುದಾಯಗಳಿಗೆ ಘೋರ ಅನ್ಯಾಯ..!!

ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಬಂಜಾರ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ : ಸುರೇಶ್ ಬಳೂಟಗಿ ಆರೋಪ!

ಕುಕನೂರು : ರಾಜ್ಯ ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ನೈಜತೆಯ ಆದಾರದ ಮೇಲೆ ಮಾಡಿರುವುದಿಲ್ಲ. ಇದು ಅವೈನಿಜ್ಞಾಕ ಕಾನೂನು ಬಾಹಿರವಾಗಿರುವ ತೀರ್ಮಾನವಾಗಿದೆ. ಇದರಿಂದ ಬಂಜಾರ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಗೋರ್ ಸೇನಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯಧರ್ಶಿ ಸುರೇಶ್ ಬಳೂಟಗಿ ಆರೋಪಿಸಿದರು.

ಇಂದು ಕುಕನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದ್ದರು, ಈ ಕುರಿತು ಮಾತನಾಡಿದ ಅವರು, ‘ನ್ಯಾ. ನಾಗಮೋಹನದಾಸ್ ಆಯೋಗವು ಪರಿಶಿಷ್ಠ ಜಾತಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸ ಹೋಗಿದ್ದರು ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ, ಈ ಸಮೀಕ್ಷೆಗೆ ಒಳಪಟ್ಟಿಲ್ಲ, ಹಾಗಾಗಿ ಅವೈಜ್ಞಾಕ ಕಾನೂನು ಬಾಹಿರವಾಗಿರುವುದು ಸತ್ಯವಿದೆ, ಆದ್ದರಿಂದ ಈ ಒಳಮೀಸಲಾತಿಯನ್ನು ಇಲ್ಲೆಗ ಕೈಬೀಟ್ಟು ಯತ್ತಾವತ್ತಾಗಿ ಜಾರಿ ಆಬೇಕು ಇಲ್ಲವಾರೇ, ಅಲೆಮಾರಿಗಳ ಸಮುದಾಯಗಳನ್ನು ಹೊರತುಪಡೆಸಿ 5 % ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆಯಲ್ಲಿ ಬಂಜಾರರ ಸಾಂಪ್ರದಾಯಿಕ ಉಡುಗೆ ತುಡಿಗಳನ್ನು ತೊಟ್ಟು ಕುಲ ಕಸುಬು ಕಟ್ಟಿಗೆ ಮಾರುವುದರ ವೇಶಧರಿಸಿ ಜೊತೆಗೆ ಬಹಳ ವಿಭಿನ್ನವಾಗಿ ಯುವಕರು ತಮ್ಮ ತಲೆ ಕೂದಲನ್ನು ಬೋಳಿಸುವ ಮುಖಾಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸರಿಯಾದ ಮಾರ್ಗ ಅನುಸರಿಸದೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡದೆ ದತ್ತಾಂಶಗಳನ್ನು ಕೃಡೀಕರಿಸಿ ಸಿದ್ಧಪಡಿಸಿರುವ ಈ ವರದಿಯನ್ನು ಅಂಗೀಕರಿಸಬಾರದು. ಮತ್ತೊಮ್ಮೆ ನೈಜತೆಯಿಂದಿರುವ ದತ್ತಾಂಶಗಳನ್ನು ಸಮೀಕ್ಷಯ ಮೂಲಕ ಕೃಡೀಕರಿಸಲು ಆಯೋಗಕ್ಕೆ ಸೂಚಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಮಾಡುವ ಜನಸಂಖ್ಯೆ ಹಾಗೂ ಜಾತಿಗಣತಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮಾತನಾಡಿದ ಯಮನೂರಪ್ಪ ಕಟ್ಟಿಮನಿ, ‘ಬುಡಗ ಜಂಗಮ ಸೇರಿದಂತೆ ಅಲೆಮಾರಿ ಸಮುದಾಯಗಳ 59 ಜಾತಿಯ ಸಹೋದರ ಸಮುದಾಯಗಳನ್ನು ಸಿ ಗುಂಪಿನಿಂದ ತಗೆದು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ದಯವಿಟ್ಟು ಬಂಜಾರ ಲಂಬಾಣಿ, ಕೊರಮ, ಕೊರಚ, ಬೋವಿ ಸಮುದಾಯದ ಜನತೆಗೆ ಸಾಂವಿಧಾನಿಕವಾಗಿ ಮೀಸಲಾತಿಯ ನ್ಯಾಯ ನೀಡಬೇಕು, ಈ ನಮ್ಮ ಹೋರಾಟವನ್ನು ಕಡೆಗೆಣಸಿದರೇ, ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ನಾವು ಸಿದ್ದರಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
