You are currently viewing BREAKING : ಕುಕನೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!!

BREAKING : ಕುಕನೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!!

BREAKING NEWS : ಕುಕನೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :

ಕುಕನೂರು : ಕುಕನೂರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 367ರ ಬಳಿ ಇಂದು ರಾತ್ರಿ 10 ಗಂಟೆ ಸುಮಾರಿಗೆ ಕಾರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹೌದು, ಕುಕನೂರು ಪಟ್ಟಣದ ಹೊರವಲಯದ ಮಗಜಿ ಮಂಗಲ ಭವನದ ಎದುರುಗಡೆಗೆ ಇರುವ ರಾಷ್ಟ್ರೀಯ ಹೆದ್ದಾರಿ 367ರ ಬಳಿ ತಡ ರಾತ್ರಿ 10 ಗಂಟೆ ಸುಮಾರಿಗೆ ಕೊಪ್ಪಳದ ಕಡೆಯಿಂದ ಕುಕನೂರು ಕಡೆ ವೇಗವಾಗಿ ಕಾರ್ಯೊಂದು ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅನಾಮದೇಯ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು ದೃಢವಾಗಿದೆ.

KA 37 N 7550 ಇದು ಡಿಕ್ಕಿ ಹೊಡೆದ ಕಾರ್ ನಂಬರ್ ಇದಾಗಿದ್ದು, ಈ ಕಾರ್ ಮಾಲೀಕರು ಇದೇ ಕುಕನೂರು ಪಟ್ಟಣದ ಮೆಡಿಕಲ್ ಶಾಪ್ ಮಾಲೀಕರೋರ್ವರ ಕಾರ್ ಎಂದು ಹೇಳಲಾಗುತ್ತಿದೆ. ಮೃತರಿಗೆ ಸಂಬಂಧಿಸಿದ ಬೈಕ್ ನಂಬರ್ KA 25 EK 6946 ಇದೆ. ಮೃತರ ದೇಹಗಳನ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ದೂರು ಇನ್ನೇನು ದಾಖಲಾಗಬೇಕಾಗಿದೆ.

 ಅಮಾಯಕ ಎರಡು ಜೀವಿಗಳು ಹಾನಿ..! : ತಪ್ಪು ಯಾರದ್ದು?

ಮಗಜಿ ಮಂಗಲ ಭವನದ ಎದುರುಗಡೆ 367 ರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿಯೇ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಅರ್ಧ ರಸ್ತೆಯಲ್ಲಿ ಮಣ್ಣು ಗುಂಪಿಗಳನ್ನ ಹಾಕಿರುವುದರಿಂದ, ಇಲ್ಲಿ ಯಾವುದೇ ರೀತಿಯಾದ ರೇಡಿಯಮ್ ವಾಲ್ಗಳು, ಸೂಚಕಗಳನ್ನ ಅಳವಡಿಸದೆ ಇರುವುದು ಕಂಡು ಬಂದಿದೆ. ಇದರಿಂದ ಕಿರಿದಾದ ರಸ್ತೆ ನಿರ್ಮಾಣವಾಗಿ, ರಾತ್ರಿ ವೇಳೆ ಸಾಕಷ್ಟು ವೇಗದಲ್ಲಿ ಬಂದ ಕಾರು ಬೈಕ್ ಸವಾರರ ಮೇಲೆ ಹರಿದು ಹೋಗಿದೆ. ಈ ಪರಿಣಾಮವಾಗಿ ಬೈಕ್ ಸವಾರರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಕಾರಿನವರದ್ದೇ ತಪ್ಪು ಎಂದು ಅಲ್ಲಿನ ಈ ಘಟನೆ ನೋಡಿದ ಕೆಲ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಊಹಾಪೋಹಗಳಿಗೆ ಪೊಲೀಸರ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಮೃತರ ಗುರುತುಗಳು ಇನ್ನು ಯಾವುದೇ ರೀತಿ ದೊರೆತಿರುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮದಲ್ಲಿ….

Leave a Reply

error: Content is protected !!