ಗೋಮಾತೆ ಕೇವಲ ರಾಜಕೀಯಕ್ಕಷ್ಟೇ ಸೀಮಿತವೇ?: ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಾವಿರಾರು ಹಸುಗಳ ದುರ್ಮರಣ; ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು, ಮೂಕಪ್ರೇಕ್ಷಕರಾದ ಗೋರಕ್ಷಕರು!!

PV ನ್ಯೂಸ್ ಡಿಜಿಟಲ್ :
ಜೈಸಲ್ಮೇರ್ (ರಾಜಸ್ಥಾನ), ಮೇ 26 : ದೇಶದಲ್ಲಿ ಗೋರಕ್ಷಣೆ ಮತ್ತು ಗೋಮಾತೆಯ ಹೆಸರಿನಲ್ಲಿ ದೊಡ್ಡ ಮಟ್ಟದ ರಾಜಕೀಯ ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ವಾಸ್ತವ ನೆಲೆಯಲ್ಲಿ ಗೋವುಗಳ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದಕ್ಕೆ ರಾಜಸ್ಥಾನದ ಜೈಸಲ್ಮೇರ್ನಿಂದ ಬಂದಿರುವ ಈ ವೀಡಿಯೊ ಸಾಕ್ಷಿಯಾಗಿದೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಪುರಸಭೆಯ ಕಸದ ಡಂಪಿಂಗ್ ಯಾರ್ಡ್ನಲ್ಲಿ 300 ಕ್ಕೂ ಹೆಚ್ಚು ಹಸುಗಳ ಕಳೇಬರಗಳು ಪತ್ತೆಯಾಗಿವೆ. ಅವುಗಳ ಕಳೇಬರಗಳು ಕೊಳೆತು ನಾರುತ್ತಿರುವ ಅತ್ಯಂತ ಕಳವಳಕಾರಿ ದೃಶ್ಯ ಬೆಳಕಿಗೆ ಬಂದಿದೆ.

