You are currently viewing BREAKING | ಕುಕನೂರು | ಅಕ್ಕಮಹಾದೇವಿ ಮೂರ್ತಿಗಿಂತ ತತ್ವ-ವಚನಗಳ ಪ್ರಚಾರಕ್ಕೆ ಆದ್ಯತೆ! : “ಮೂರ್ತಿ ಪೂಜೆ ಲಿಂಗಾಯತ ಧರ್ಮದ ತತ್ವವಲ್ಲ” : ಸಚಿವ ಬಸವರಾಜ ರಾಯರೆಡ್ಡಿ!

BREAKING | ಕುಕನೂರು | ಅಕ್ಕಮಹಾದೇವಿ ಮೂರ್ತಿಗಿಂತ ತತ್ವ-ವಚನಗಳ ಪ್ರಚಾರಕ್ಕೆ ಆದ್ಯತೆ! : “ಮೂರ್ತಿ ಪೂಜೆ ಲಿಂಗಾಯತ ಧರ್ಮದ ತತ್ವವಲ್ಲ” : ಸಚಿವ ಬಸವರಾಜ ರಾಯರೆಡ್ಡಿ!

🚨 BREAKING |ಅಕ್ಕಮಹಾದೇವಿ ಮೂರ್ತಿಗಿಂತ ತತ್ವ-ವಚನಗಳ ಪ್ರಚಾರಕ್ಕೆ ಆದ್ಯತೆ! : “ಮೂರ್ತಿ ಪೂಜೆ ಲಿಂಗಾಯತ ಧರ್ಮದ ತತ್ವವಲ್ಲ” : ಸಚಿವ ಬಸವರಾಜ ರಾಯರೆಡ್ಡಿ!

PV NEWS ಕನ್ನಡ 24×7 : 

ಕುಕನೂರು, ಜು. 6 : ಅಕ್ಕಮಹಾದೇವಿಯವರ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕಿಂತ ಅವರ ತತ್ವ, ವಿಚಾರಧಾರೆ ಮತ್ತು ವಚನಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಆದ್ಯತೆ ನೀಡುವುದು ಹೆಚ್ಚು ಅರ್ಥಪೂರ್ಣ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಪದಾಧಿಕಾರಿಗಳು ಮೂರ್ತಿ ನಿರ್ಮಿಸಿಕೊಡುವಂತೆ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

“ನಿಜವಾದ ಲಿಂಗಾಯತ ಧರ್ಮದ ತತ್ವವು ಇಷ್ಟಲಿಂಗ ಆರಾಧನೆಗೆ ಮಹತ್ವ ನೀಡುತ್ತದೆ. ಮೂರ್ತಿ ಪೂಜೆಗೆ ಅದರಲ್ಲಿ ಸ್ಥಾನವಿಲ್ಲ. ಆದ್ದರಿಂದ ಮೂರ್ತಿ ನಿರ್ಮಾಣಕ್ಕೆ ವೆಚ್ಚ ಮಾಡುವ ಬದಲು ಅಕ್ಕಮಹಾದೇವಿಯವರ ವಚನಗಳು, ಜೀವನದರ್ಶನ ಹಾಗೂ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ,” ಎಂದು ಹೇಳಿದರು.

ಅಕ್ಕಮಹಾದೇವಿಯವರ ವಿಚಾರಧಾರೆಯ ಕುರಿತು ಉಪನ್ಯಾಸ, ವಚನ ವಾಚನ, ಅಧ್ಯಯನ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಸಂಘವು ಆಯೋಜಿಸಿದರೆ ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ಅನುದಾನ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.

ಲಿಂಗಾಯತ ಧರ್ಮದ ಮೂಲ ತತ್ವವನ್ನು ಉಲ್ಲೇಖಿಸಿದ ಅವರು, “ದೇವರು ನಿರಾಕಾರ ಎಂಬ ನಂಬಿಕೆಯನ್ನು ಲಿಂಗಾಯತ ಧರ್ಮ ಪ್ರತಿಪಾದಿಸುತ್ತದೆ. ನಿಜವಾದ ಲಿಂಗಾಯತರು ಇಷ್ಟಲಿಂಗ ಆರಾಧನೆ ಮಾಡುತ್ತಾರೆಯೇ ಹೊರತು ಮೂರ್ತಿ ಪೂಜೆ ಮಾಡುವುದಿಲ್ಲ,” ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ಸಚಿವರು, ಮೂರ್ತಿ ನಿರ್ಮಾಣದಂತಹ ವೆಚ್ಚಗಳಿಗಿಂತ ಮಹಿಳಾ ಸಬಲೀಕರಣ, ಶಿಕ್ಷಣ, ಸಾಮಾಜಿಕ ಜಾಗೃತಿ ಹಾಗೂ ವೈಚಾರಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಸಾರ್ವಜನಿಕ ಹಣವನ್ನು ಮೂರ್ತಿ ನಿರ್ಮಾಣಕ್ಕೆ ವ್ಯಯಿಸುವ ಬದಲು ಸಮಾಜಕ್ಕೆ ಶಾಶ್ವತ ಪ್ರಯೋಜನವಾಗುವ ಹಾಗೂ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಬಳಸಬೇಕು ಎಂಬುದು ತಮ್ಮ ಆಶಯ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!