LOCAL NEWS : ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ವಕ್ತಾರರನ್ನಾಗಿ ಐದು ಜನ ಕಾರ್ಯಕರ್ತರ ನೇಮಕ!
ಕುಕನೂರು : ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ವಕ್ತಾರರನ್ನಾಗಿ ಐದು ಜನ ಕಾರ್ಯಕರ್ತರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸೇವೆ ಅಭಿವೃದ್ಧಿಗಾಗಿ ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ವಕ್ತಾರಾರನ್ನಾಗಿ ಕುಕನೂರು ಪಟ್ಟಣದ ಸಂಗಮೇಶ ಗುತ್ತಿ ಹಾಗೂ ಗಗನ್ ನೋಟಗಾರ ಕಕ್ಕಿಹಳ್ಳಿ ಗ್ರಾಮದ ಯಮನಪ್ಪ ಕಟ್ಟಿಮನಿ ಮಂಡಲಗಿರಿ ಗ್ರಾಮದ ಮೊಮ್ಮದ್ ರಫಿ ಹಾಗೂ ಮುತ್ತು ವಾಲ್ಮೀಕಿ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಲಾಗಿದೆ.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರ ಅವರು ಈ 5 ಜನರನ್ನು ಕುಕನೂರು ಬ್ಲಾಕ್ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ.