LOCAL NEWS : ಭ್ರಷ್ಟರನ್ನು ಬಯಲಿಗೆ ಎಳೆಯುವ ನಮ್ಮ ಪ್ರಮುಖ ಉದ್ದೇಶವಾಗಿತ್ತು : ಅಭ್ಯರ್ಥಿ ಸಿದ್ದಯ್ಯ ಕಳ್ಳಿಮಠ
ಕುಕನೂರು : ಪ್ರಥಾಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆದ್ದರೇ ನಮಗೇನು ಇಂದ್ರನ ಪದವಿ ದೊರೆಯುತ್ತಾ?, ನಾವು ಚುನಾವಣೆ ನಡೆಸಿದ್ದ ಪ್ರಮುಖ ಉದ್ದೇಶವೇ ಅಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಇಂದು ನಗರದ ಬ್ಲಾಕ್ ಕಾಂಗ್ರೆಸ್ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ನಂತರ ಬಿಜೆಪಿಗರು ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆಯನ್ನು ಮಾಡಿದರು, ಆದರೆ 1733 ಸಂಘದ ಸದಸ್ಯರಲ್ಲಿ ಕೇವಲ 330 ಮತಗಳು ಉಳಿದಾಗ, ರೈತರಿಗೆ ಅನ್ಯಾಯವಾಗಿದ್ದು ಇವರಿಗೆ ಗೊತ್ತಾಗಲಿಲ್ಲವೇ ಎಂದು ಪ್ರಶ್ನೀಸಿದರು ಬರೋಬ್ಬರಿ 1700 ಸದಸ್ಯರ ಮತದಾನ ಹಕ್ಕು ಇದ್ದದ್ದನ್ನು ಕೇವಲ 330 ಸದಸ್ಯರ ಮತದಾನ ಹಕ್ಕನ್ನು ಮಾಡಿಕೊಂಡು, ತಮಗೆ ಬೇಕಾದವರಿಗೆ ಮಾತ್ರ ಮತದಾನ ನೀಡುತ್ತಿದ್ದರಿಂದ ನಾವು ಸಹ ಕಾನೂನು ಚೌಕಟ್ಟಿನಲ್ಲಿ ರೈತಪರ ಕಾಳಜಿಯಿಂದ ಸ್ಪರ್ಧೆಗೆ ಇಳಿದಿದ್ದೇವೆ. ನೋಡೋಣ ಫಲಿತಾಂಶ ಏನಾಗುತ್ತೇ? ಅಂತ. ಸದಸ್ಯರ ನಿರ್ಧಾರ ಏನೇ ಇದ್ದರೂ ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.