Local : “ಕೊಪ್ಪಳದಲ್ಲಿ ಭಗವಾನ್ ಮಹಾವೀರ ಜಯಂತಿ ಅದ್ದೂರಿ ಆಚರಣೆ”

You are currently viewing Local : “ಕೊಪ್ಪಳದಲ್ಲಿ ಭಗವಾನ್ ಮಹಾವೀರ ಜಯಂತಿ ಅದ್ದೂರಿ ಆಚರಣೆ”

LOCAL NEWS : ಅದ್ದೂರಿ ಭಗವಾನ್ ಮಹಾವೀರ ಜಯಂತಿ ಆಚರಣೆ

 

ಕೊಪ್ಪಳ : ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ ಜಯಂತಿಯ ಅಂಗವಾಗಿ ಕೊಪ್ಪಳದಲ್ಲಿ ಗುರುವಾರ ಮಹಾವೀರರ ಭಾವಚಿತ್ರದ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಹಯೋಗದಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಮೆರವಣಿಗೆಗೆ ನಗರದ ಅಶೋಕ್ ವೃತ್ತದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ತಹಶಿಲ್ದಾರರ ವಿಠ್ಠಲ ಚೌಗಲಾ, ಇತರೆ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

 

*ಮೆರವಣಿಗೆಯಲ್ಲಿ ಭಾಗಿ:* 

ಕೊಪ್ಪಳ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡು, ಸಮಾಜದವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಕ್ಬರಪಾಶಾ ಪಲ್ಟನ್, ಸದಸ್ಯರಾದ ಮಹೀಂದ್ರಾ ಛೋಪ್ರಾ, ರಾಜಶೇಖರ ಆಡೂರ ಹಾಗೂ ಇತರ ಸದಸ್ಯರು, ಜೈನ ಸಮಾಜದ ಮುಖಂಡರಾದ ಹೀರೋ ಜಿರಾವಲಾ, ರಾಜೇಂದ್ರ ಜೈನ, ರಾಜೇಶ ಲುಂಕಡ, ಮಹಾವೀರ ಸಂಕಲೇಚಾ, ಮಹೇಂದ್ರ ಲುಂಕಡ, ಪ್ರಮೋದ ಜೈನ, ದೀಪಚಂದ ನಿರ್ಮಲ ಚೋಪ್ರಾ, ಭರತ ಮೆಹ್ತಾ, ಜವಾಹರಲಾಲ, ಅಶೋಕ, ದಿಲೀಪ, ಮಹಾವೀರ ವಿನಾಯಕಿಯಾ, ಗೌತಮ ಪಾಲರೇಚಾ, ಗಣ್ಯರಾದ ಕವಿತಾ ಜಿರಾವಲಾ, ವೈಶಾಲಿ ಧಾನೇಶಾ, ಜ್ಯೋತಿ ಪಾರಿಜಾತ, ಸಂಗೀತಾ ಚೋಪ್ರಾ, ಅನಿತಾ ಚೋಪ್ರಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

*ಅದ್ದೂರಿ ಮೆರವಣಿಗೆ:*

ಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಭಾವಚಿತ್ರದ ಮೆರವಣಿಗೆ ನಗರದ ಅಶೋಕ ವೃತ್ತದಿಂದ ಪ್ರಾರಂಭಗೊಂಡು ಜವಾಹರ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಕೋಟೆ ರಸ್ತೆಯ ಜೈನ್ ಬಸದಿವರೆಗೆ ಸಾಗಿ, ಅಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ನಂತರ ಅಲ್ಲಿಂದ ಪುನಃ ಗಡಿಯಾರ ಕಂಬದ ಮಾರ್ಗವಾಗಿ ಗೋಶಾಲೆ ರಸ್ತೆಯ ಜೈನ್ ಮಂದಿರದ ವರೆಗೆ ವಿಜ್ರಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

Leave a Reply

error: Content is protected !!