ಮುದಗಲ್ಲ ವರದಿ
ಶಂಕರ ಜಯಂತಿ ಆಚರಣೆ…
ಮುದಗಲ್ಲ :-ಪುರಸಭೆಯಲ್ಲಿ ಶುಕ್ರವಾರ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡಲಾಯಿತು ಭಾವಚಿತ್ರಕ್ಕೆ ಪುರಸಭೆ ಯ ಸಿಬ್ಬಂದಿ ಚನ್ನಮ್ಮ ದಳವಾಯಿಮಠ ಅವರು ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಯ ಕಂದಾಯ ವಿಭಾಗದ ಅಧಿಕಾರಿಯಾದ ದೇವರಾಜ ,ಸಿಬ್ಬಂದಿಗಳಾದ ನಿಸಾರ್ ಅಹಮದ್,ಪೌರ ಕಾರ್ಮಿಕರಾದ ಬಸವರಾಜ ಕಟ್ಟಿಮನಿ, ರಮೇಶ್ ಹಟ್ಟಿ, ರವಿಕುಮಾರ್ ,ಯಂಕಣ್ಣ ದೇಶಪಾಂಡೆ, ಇತರರು ಉಪಸ್ಥಿತರಿದ್ದರು.