LOCAL NEWS : ಪತ್ರಕರ್ತ ವಿಶ್ವನಾಥ್ ಪಟ್ಟಣಶೆಟ್ಟಿ ಅವರ ಹಿರಿಯ ಸಹೋದರಿ ನಿಧನ!
ಕುಕನೂರು : ಪತ್ರಕರ್ತ ವಿಶ್ವನಾಥ್ ಪಟ್ಟಣಶೆಟ್ಟಿ ಅವರ ಹಿರಿಯ ಸಹೋದರಿ ಜಯಪ್ರಭಾ ಜಗದೀಶ್ ಚಿನ್ನವಾಲರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಟ್ಟಣದ ಕೋಳಿಪೇಟೆಯ ಕಿಲ್ಲೆದ್ ಓಣಿಯ ನಿವಾಸಿಯಾಗಿದ್ದಾರೆ. ಮೃತ ಜಯಪ್ರಬಾರ್ ಅವರು ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 12 ಗಂಟೆಗೆ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಇಂದು ಅವರ ತವರು ಮನೆಯ ಕುಕನೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ವೃತ್ತಿಯಲ್ಲಿ ಜಯಪ್ರಭಾ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯಾಗಿದ್ದ ಇವರು, ಸಾಕಷ್ಟು ಮಹಿಳೆಯರ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ಹಾಗೂ ಗರ್ಭಿಣಿಯರ ಮತ್ತು ಬಾಣಂತಿಯರ ಸುರಕ್ಷತೆ ದೃಷ್ಟಿಯಲ್ಲಿ ಸಾಕಷ್ಟು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಈ ಭಾಗದ ಮಹಿಳೆಯರ ಪಾಲಿನ “ಮಹಾತಾಯಿ” ಅಂದೇ ಖ್ಯಾತಿ ಪಡೆದಿದ್ದರು ಎನ್ನಲಾಗಿದೆ.