ಪ್ರಜಾವೀಕ್ಷಣೆ ಸುದ್ದಿ :
BIG NEWS : ಬಾಲ್ಯ ವಿವಾಹ ಪ್ರಕರಣ : ಉಪನೋಂದಣಾಧಿಕಾರಿ ಸೇರಿ ಹಲವರ ವಿರುದ್ಧ ಎಫ್ಐಆರ್!

ಗಂಗಾವತಿ : ಕಳೆದ 2024ರ ಸೆಪ್ಟೆಂಬರ್ 17ರಂದು ಕಾನೂನು ಪ್ರಕಾರವೇ ಮದುವೆಯಾಗಿದೆ ಎಂದು ನೋಂದಣಿ ಮಾಡಲಾಗಿದೆ. ವಿವಾಹವಾದಾಗ ಬಾಲಕಿಗೆ 18 ವರ್ಷ ತುಂಬಿದ್ದರೆ, ಹುಡುಗನಿಗೆ 20 ವರ್ಷ ಆರು ತಿಂಗಳು ಏಳು ದಿನಗಳಷ್ಟೇ ಆಗಿದೆ. ಈ ಕಾರಣಕ್ಕೆ ರಕ್ಷಣಾ ಘಟಕದ ಸಂಯೋಜಕ ಶರಣಪ್ಪ ಸಿಂಗನಾಳ ದೂರ ನೀಡಿದ್ದಾರೆ.
ಈ ಕುರಿತು ಇದೇ ಸೆ.5ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಉಲ್ಲೇಖಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿಯ ಕಾರ್ಯಕ್ರಮ ಸಂಯೋಜಕ ಶರಣಪ್ಪ ಸಿಂಗನಾಳ ನೀಡಿದ ದೂರಿನ ಆಧಾರದ ಮೇಲೆ ಈಗ ಎಫ್ಐಆರ್ ದಾಖಲಾಗಿದೆ.
ನೋಂದಣಿಗೆ ಸಾಕ್ಷಿಯಾಗಿ ಸಹಿ ಮಾಡಿದ್ದ ಗಂಗಾವತಿಯ ಬಸವರಾಜ, ದೇವರಾಜ, ಶರಣಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಲ್ಯ ವಿವಾಹ ಎಂದು ಗೊತ್ತಿದ್ದರೂ ಪ್ರಭಾರ ಉಪನೋಂದಣಾಧಿಕಾರಿ ವಿವಾಹ ನೋಂದಣಿ ಮಾಡಿದ್ದಾರೆ. ಹುಡುಗ ದಾಖಲೆಗಾಗಿ ನಾಲ್ಕನೇ ತರಗತಿಯ ಪ್ರಗತಿ ಪತ್ರ ಸಲ್ಲಿಸಿದ್ದು, ಇದರ ದಾಖಲೆ ಪ್ರಕಾರ ಮದುವೆಗೆ ವಯಸ್ಕನಲ್ಲ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ಬಾಲ್ಯವಿವಾಹ ಮಾಡಿಕೊಂಡವರು, ಮಾಡಿದವರು, ಪ್ರೋತ್ಸಾಹ ನೀಡಿದವರು ಮತ್ತು ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶರಣಪ್ಪ ಸಿಂಗನಾಳ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ