SPECIAL STORY : ನಾವೀನ್ಯತೆಯಿಂದ ವಿಶ್ವದ ಆರ್ಥಿಕ ಬೆಳವಣಿಗೆ : ಮೋಕ್ಯರ್, ಅಗಿಯಾನ್ ಮತ್ತು ಹೌವಿಟ್ ಗೆ ನೊಬೆಲ್ ಪ್ರಶಸ್ತಿ..!

You are currently viewing SPECIAL STORY : ನಾವೀನ್ಯತೆಯಿಂದ ವಿಶ್ವದ ಆರ್ಥಿಕ ಬೆಳವಣಿಗೆ : ಮೋಕ್ಯರ್, ಅಗಿಯಾನ್ ಮತ್ತು ಹೌವಿಟ್ ಗೆ ನೊಬೆಲ್ ಪ್ರಶಸ್ತಿ..!

ಪ್ರಜಾ ವೀಕ್ಷಣೆ ವಿಶೇಷ ಲೇಖನ

SPECIAL STORY : ನಾವೀನ್ಯತೆಯಿಂದ ವಿಶ್ವದ ಆರ್ಥಿಕ ಬೆಳವಣಿಗೆ : ಮೋಕ್ಯರ್, ಅಗಿಯಾನ್ ಮತ್ತು ಹೌವಿಟ್ ಗೆ ನೊಬೆಲ್ ಪ್ರಶಸ್ತಿ..!

ಪ್ರಜಾ ವೀಕ್ಷಣೆ ವಿಶೇಷ ಲೇಖನ : ಸ್ವೀಡಿಷ್ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಜೋಯಲ್ ಮೋಕ್ಯರ್, ಫಿಲಿಪ್ ಅಗಿಯಾನ್ ಮತ್ತು ಪೀಟರ್ ಹೌವಿಟ್ ಅವರಿಗೆ 2025ರ ರ‍್ಥಿಕಶಾಸ್ತ್ರ ನೊಬೆಲ್ ಬಹುಮಾನವನ್ನು ನೀಡಿರುವುದಾಗಿ ಘೋಷಿಸಿದೆ. ಮೋಕ್ಯರ್ ಅವರು ತಾಂತ್ರಿಕ ಪ್ರಗತಿಯ ಮೂಲಕ ದರ‍್ಘಕಾಲಿಕ ಬೆಳವಣಿಗೆ ಹೇಗೆ ಸಾಧ್ಯವಾಯಿತು ಎಂದು ತೋರಿದಕ್ಕಾಗಿ ರ‍್ಧ ಪ್ರಶಸ್ತಿ ಪಡೆದಿದ್ದಾರೆ. ಅಗಿಯಾನ್ ಮತ್ತು ಹೌವಿಟ್ ರಚನೆಯ ನಾಶಾತ್ಮಕತೆಯ ಮೂಲಕ ಬೆಳವಣಿಗೆಯ ತತ್ತ್ವವನ್ನು ವಿವರಿಸಿದ್ದಕ್ಕಾಗಿ ಇನ್ನು ಉಳಿದ ರ‍್ಧವನ್ನು ಹಂಚಿಕೊಂಡಿದ್ದಾರೆ.


ಕೈಗಾರಿಕಾ ಕ್ರಾಂತಿಯ ಮೊದಲು, ಜನರ ಜೀವನಮಟ್ಟ ದರ‍್ಘಕಾಲ ಸ್ಥಿರವಾಗಿತ್ತು. ಕೆಲವೊಂದು ಹೊಸ ಆವಿಷ್ಕಾರಗಳು ಬಂದರೂ, ಅವು ದರ‍್ಘಕಾಲಿಕ ಬೆಳವಣಿಗೆಗೆ ಕಾರಣವಾಗುತ್ತಿರಲಿಲ್ಲ. ಮೋಕ್ಯರ್ ಅವರ ಸಂಶೋಧನೆ ಪ್ರಕಾರ, ರ‍್ಥಿಕ ಬೆಳವಣಿಗೆಗೆ ಎರಡು ರೀತಿಯ ಜ್ಞಾನ ಮುಖ್ಯ: ಮೊದಲದು, ಏಕೆ ಒಂದು ತಂತ್ರಜ್ಞಾನ ಅಥವಾ ವಿಧಾನ ಕೆಲಸ ಮಾಡುತ್ತದೆ ಎಂಬ ರ‍್ಥಮಾಡಿಕೊಳ್ಳುವ ಜ್ಞಾನ; ಮತ್ತು ಎರಡನೆಯದು, ಅದನ್ನು ಹೇಗೆ ಪ್ರಯೋಗದಲ್ಲಿ ಬಳಸಬೇಕು ಎಂಬ ಜ್ಞಾನ. ಈ ಎರಡೂ ಜ್ಞಾನಗಳನ್ನು ಒಟ್ಟಿಗೆ ಬಳಸಿದಾಗ ಮಾತ್ರ ನವೀನತೆಯಿಂದ ಸ್ಥಿರ ಬೆಳವಣಿಗೆ ಸಾಧ್ಯ. ಜೊತೆಗೆ, ಹೊಸ ಕಲ್ಪನೆಗಳಿಗೆ ತೆರೆದಿರುವ ಮತ್ತು ಬದಲಾವಣೆಯನ್ನು ಸ್ವೀಕರಿಸುವ ಸಮಾಜಗಳು ಹೆಚ್ಚು ಯಶಸ್ವಿಯಾಗುತ್ತವೆ.

ಅಗಿಯಾನ್ ಮತ್ತು ಹೌವಿಟ್ ರಚನೆಯ ನಾಶಾತ್ಮಕತೆಯ ಮಾದರಿಯಲ್ಲಿ, ಹೊಸ ಮತ್ತು ಉತ್ತಮ ತಂತ್ರಜ್ಞಾನ ಅಥವಾ ಉತ್ಪನ್ನಗಳು ಹಳೆಯದನ್ನು ಬದಲಾಯಿಸುತ್ತವೆ. ಇದು ಹೊಸ ಅವಕಾಶಗಳನ್ನು ನೀಡುತ್ತದೆ, ಆದರೆ ಹಳೆಯ ಉದ್ಯಮಗಳು ಮತ್ತು ಉದ್ಯೋಗಗಳಿಗೆ ಅಡಚಣೆ ಉಂಟುಮಾಡಬಹುದು. ಆದ್ದರಿಂದ ಸರಿಯಾದ ನೀತಿಗಳ ಅಗತ್ಯವಿದೆ.

ಈ ಶೋಧನೆಯು ಉಆP ಹೆಚ್ಚಳಕ್ಕಿಂತ ಹೆಚ್ಚಿನ ರ‍್ಥ ಹೊಂದಿದೆ. ಉತ್ತಮ ಆರೋಗ್ಯ, ಸುರಕ್ಷಿತ ಉತ್ಪನ್ನಗಳು, ಉತ್ತಮ ಶಿಕ್ಷಣ ಮತ್ತು ಜೀವನಮಟ್ಟದ ಸುಧಾರಣೆ ಇದರ ಭಾಗವಾಗಿದೆ. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಸಮಾಜಕ್ಕೆ ಹೇಗೆ ಪ್ರಯೋಜನ ನೀಡುತ್ತವೆ ಎಂಬುದನ್ನು ಅವರು ತೋರಿಸಿದ್ದಾರೆ.

ಅಗಿಯಾನ್ ಮತ್ತು ಹೌವಿಟ್ ರಚನೆಯ “ರಚನೆಯ ನಾಶಾತ್ಮಕತೆಯ” ಮಾದರಿಯಲ್ಲಿ, ಹೊಸ ಮತ್ತು ಉತ್ತಮ ತಂತ್ರಜ್ಞಾನ ಅಥವಾ ಉತ್ಪನ್ನಗಳು ಹಳೆಯ ಉತ್ಪನ್ನಗಳನ್ನು ಬದಲಾಯಿಸುತ್ತವೆ. ಇದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಆದರೆ ಹಳೆಯ ಕಂಪನಿಗಳು ನಷ್ಟ ಪಡಬಹುದು ಮತ್ತು ಕೆಲವು ಉದ್ಯೋಗಗಳು ಇಲ್ಲವಾಗಬಹುದು. ಅದ್ದರಿಂದ ಸರಿಯಾದ ನೀತಿಗಳನ್ನು ರೂಪಿಸಿ, ಈ ಬದಲಾವಣೆಯನ್ನು ಸರ‍್ಥವಾಗಿ ನರ‍್ವಹಿಸಬೇಕು. ಆದ್ದರಿಂದ ಸರಿಯಾದ ನೀತಿಗಳ ಅಗತ್ಯವಿದೆ.

ಇದರಿಂದ ಜಿಡಿಪಿ ಮಾತ್ರ ಹೆಚ್ಚಾಗುವುದಲ್ಲ, ಜನರ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ. ಉದಾಹರಣೆಗೆ, ಉತ್ತಮ ಆರೋಗ್ಯ, ಸುರಕ್ಷಿತ ಉತ್ಪನ್ನಗಳು, ಉತ್ತಮ ಶಿಕ್ಷಣ ಮತ್ತು ಉತ್ತಮ ಜೀವನಮಟ್ಟವೇ ಇದರ ಭಾಗ. ಮೋಕ್ಯರ್, ಅಗಿಯಾನ್ ಮತ್ತು ಹೌವಿಟ್ ಅವರ ಶೋಧನೆಯು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಸಮಾಜಕ್ಕೆ ಹೇಗೆ ಉಪಯುಕ್ತವಾಗುತ್ತವೆ ಎಂಬುದನ್ನು ನಮಗೆ ತೋರಿಸುತ್ತದೆ.

ರ‍್ಥಿಕಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ, ಮೋಕ್ಯರ್, ಅಗಿಯಾನ್ ಮತ್ತು ಹೌವಿಟ್ ಅವರ ಶೋಧನೆ ಶೈಕ್ಷಣಿಕ ಸಂಶೋಧನೆ ಮಾತ್ರವಲ್ಲ, ಸಮಾಜಕ್ಕೂ ನೆರವಾಗುತ್ತದೆ ಎಂದು ನನಗೆ ಹೆಮ್ಮೆ. ಅವರ ಸಂಶೋಧನೆ ವಿಚಾರಗಳು ಅಭಿವೃದ್ಧಿಯ ಮಹತ್ವವನ್ನು ಒತ್ತಿ ತೋರಿಸುತ್ತವೆ ಮತ್ತು ಭವಿಷ್ಯದ ರ‍್ಥಿಕಶಾಸ್ತ್ರಜ್ಞರನ್ನು ಪ್ರೇರೇಪಿಸುತ್ತವೆ.

ಡಾ. ದುರಗೇಶ ಪೂಜಾರಿ
ಸಹಾಯಕ ಪ್ರಾಧ್ಯಾಪಕರು

ಲೇಖರರು : – ಡಾ. ದುರಗೇಶ ಪೂಜಾರಿ

                   ಸಹಾಯಕ ಪ್ರಾಧ್ಯಾಪಕರು
ಅರ್ಥಶಾಸ್ತç ವಿಭಾಗ

                ಶ್ರೀ ಶಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರಗುಂದ.

Leave a Reply

error: Content is protected !!