BREAKING : ಗುಜರಿ ಲಾರಿ–ಮಿನಿ ಬಸ್ ಭೀಕರ ಡಿಕ್ಕಿ: ಪ್ರವಾಸಿಗರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ..! : ಹೈವೇ ಪೆಟ್ರೋಲ್ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ?

You are currently viewing BREAKING : ಗುಜರಿ ಲಾರಿ–ಮಿನಿ ಬಸ್ ಭೀಕರ ಡಿಕ್ಕಿ: ಪ್ರವಾಸಿಗರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ..! : ಹೈವೇ ಪೆಟ್ರೋಲ್ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ?

BREAKING : ಗುಜರಿ ಲಾರಿ–ಮಿನಿ ಬಸ್ ಭೀಕರ ಡಿಕ್ಕಿ: ಪ್ರವಾಸಿಗರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ..! : ಹೈವೇ ಪೆಟ್ರೋಲ್ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ?

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : 

ಹೈವೇ ಪೆಟ್ರೋಲ್ ಪೊಲೀಸರ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ?

ಕೋಪಳ : ಇಂದು ಕೊಪ್ಪಳ ತಾಲೂಕಿನ ಹಲಗೇರಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಗುಜರಿ ಲಾರಿಗೆ ನಿಯಂತ್ರಣ ತಪ್ಪಿ ಟಿಟಿ ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಭೀಕರ ಘಟನೆ ಸಂಭವಿಸಿದೆ. ಬಸ್‌ನಲ್ಲಿದ್ದ ಅನೇಕ ಪ್ರವಾಸಿಗರಿಗೆ ಗಾಯಗಳಾಗಿದ್ದು, ಚಾಲಕ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಇಂದು 10 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ, ಶಾಂಭವಿ ಹೋಟೆಲ್–ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಗುಜರಿ ಲಾರಿಗೆ ಗದಗನಿಂದ ಕೊಪ್ಪಳದ ಕಡೆ ಬರುತ್ತಿರುವ ಟಿಟಿ ಮಿನಿ ಬಸ್‌ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಈ ಮಿನಿ ಬಸ್‌ನಲ್ಲಿದ್ದ ಪ್ರಯಾಣಿಕರು ಮತ್ತು ಚಾಲಕನಿಗೆ ಗಂಭೀರ ಗಾಯಳಾಗಿವೆ ಎಂದು ತಿಳಿದು ಬಂದಿದೆ.

ಈ ಘಟನೆ ಸಂದರ್ಭದಲ್ಲಿ ಹೈವೇ ಪೆಟ್ರೋಲ್ ಸಂಚಾರಿ ಪೊಲೀಸರು ರಸ್ತೆಬದಿಯಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು ಎನ್ನಲಾಗಿದೆ. ಇದರ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಅಪಘಾತಕ್ಕೆ ನೇರ ಕಾರಣವಾಯಿತು ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿ ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರು ನೆರವಾಗದೇ ಅಲ್ಲಿಂದ ಓಡಿದಾರೆ ಎಂಬ ಗಂಭೀರ ಆರೋಪ!!

ಈ ಅಪಘಾತ ನಡೆದ ಕ್ಷಣದಲ್ಲೇ ಸ್ಥಳದಲ್ಲಿದ್ದ ಹೈವೇ ಪೆಟ್ರೋಲ್ ಪೊಲೀಸರು ಗಾಯಾಳುಗಳಿಗೆ ನೆರವು ನೀಡದೆ, ಯಾವುದೇ ಕ್ರಮ ಕೈಗೊಳ್ಲದೇ ಅಲ್ಲಿಂದ ಓಡಿಹೊಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಒಬ್ಬ ಯುವಕ ಪ್ರಜಾ ವೀಕ್ಷಣೆ ಡಿಜಿಟಲ್‌ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ.

“ಅಪಘಾತ ನಡೆದರೂ ದೂರು ಸಹ ದಾಖಲಾಗಿಲ್ಲ” ಈ ಘಟನೆಯ ನಂತರ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂಬುದು ಸ್ಥಳೀಯರ ಮತ್ತೊಂದು ಗಂಭೀರ ಆರೋಪ ಂಆಡಿದ್ದಾರೆ.

“ಪೊಲೀಸರು ಸ್ಥಳದಲ್ಲಿದ್ದರೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿಲ್ಲ. ಬದಲಿಗೆ ಅಪಘಾತವಾದ ತಕ್ಷಣವೇ ಅಲ್ಲಿಂದ ಓಡಿ ಹೋದರು. ದೂರು ದಾಖಲಿಸುವ ಕೆಲಸವನ್ನೂ ನಡೆಸಿಲ್ಲ. ಇದು ಸಂಚಾರಿ ಪೊಲೀಸರ ಗಂಭೀರ ನಿರ್ಲಕ್ಷ್ಯ.”

ಈ ಘಟನೆ ಪ್ರತ್ಯಕ್ಷದರ್ಶಿ ಪ್ರದೀಪ್ ಕುಮಾರ್, ಇರಕಲ್

Leave a Reply

error: Content is protected !!