You are currently viewing SPECIAL STORY : ಕುಕನೂರು|ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ: ಪ್ರಗತಿಯ ಪಥದಲ್ಲಿ ಯೋಜನೆ, ಏಳು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ..!

SPECIAL STORY : ಕುಕನೂರು|ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ: ಪ್ರಗತಿಯ ಪಥದಲ್ಲಿ ಯೋಜನೆ, ಏಳು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ..!

SPECIAL STORY : ಕುಕನೂರು|ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ: ಪ್ರಗತಿಯ ಪಥದಲ್ಲಿ ಯೋಜನೆ, ಏಳು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ..!

 

– ವಿಶೇಷ ವರದಿ: ಚಂದ್ರು ಆರ್. ಭಾನಾಪುರ್

ಕುಕನೂರು : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ, ಗ್ರಾಮೀಣ ಅಭಿವೃದ್ಧಿ ಇಲಾಖೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಒಟ್ಟು ಏಳು ರಸ್ತೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾಗಿದೆ.

ಶಾಸಕ ಬಸವರಾಜ ರಾಯರೆಡ್ಡಿ ಅವರ ಪ್ರಯತ್ನದ ಫಲವಾಗಿ ಈ ರಸ್ತೆ ಕಾಮಗಾರಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿದುಬಂದಿದೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗದ ಜನರ ಸಂಚಾರ ಸುಗಮವಾಗಲಿದ್ದು, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

ಅನುಮೋದನೆಗೊಂಡ ರಸ್ತೆ ಕಾಮಗಾರಿಗಳ ವಿವರ

ಹಿರೇಮ್ಯಾಗೇರಿ – ಬೆಳ್ಳೇರಿ ರಸ್ತೆ

ಉದ್ದ: 3 ಕಿ.ಮೀ.

ವೆಚ್ಚ: ₹3.27 ಕೋಟಿ

ಬಂಡಿ ಕಡಬಳಕಟ್ಟಿ – ಚಿಕ್ಕಬಿನ್ನಿಗೋಳ ರಸ್ತೆ

ಉದ್ದ: 8 ಕಿ.ಮೀ.

ವೆಚ್ಚ: ₹5.45 ಕೋಟಿ

ಕುಕನೂರು ಗೋರಲೆಕೊಪ್ಪ – ಮುಂಡಲಗೇರಿ ಕ್ರಾಸ್ ರಸ್ತೆ

ಉದ್ದ: 4 ಕಿ.ಮೀ.

ವೆಚ್ಚ: ₹2.88 ಕೋಟಿ

ವಜ್ರಬಂಡಿ – ಸಾಲಬಾವಿ ರಸ್ತೆ

ಉದ್ದ: 3 ಕಿ.ಮೀ.

ವೆಚ್ಚ: ₹1.91 ಕೋಟಿ

ಗಾಣದಾಳ – ಕಟ್ಟಿಗೆಹಳ್ಳಿ ರಸ್ತೆ

ಉದ್ದ: 4.80 ಕಿ.ಮೀ.

ವೆಚ್ಚ: ₹2.04 ಕೋಟಿ

 ರಾವಣಕಿ – ಬೇವುರು ಕ್ರಾಸ್ ರಸ್ತೆ

ಉದ್ದ: 4.51 ಕಿ.ಮೀ.

ವೆಚ್ಚ: ₹3.90 ಕೋಟಿ

ಬಳಗೇರಿ – ಯಡಿಯಾಪುರ ರಸ್ತೆ

ಉದ್ದ: 2.83 ಕಿ.ಮೀ.

ವೆಚ್ಚ: ₹2.13 ಕೋಟಿ

ಗ್ರಾಮೀಣ ಸಂಪರ್ಕಕ್ಕೆ ಹೊಸ ಬಲ

ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ನಂತರ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಇನ್ನಷ್ಟು ಬಲವಾಗಲಿದ್ದು, ಕೃಷಿ ಉತ್ಪನ್ನಗಳ ಸಾಗಾಟ, ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಚಾರ ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೂ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನೇಕ ಗ್ರಾಮಗಳಲ್ಲಿ ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಬೇಡಿಕೆ ಇತ್ತು. ಈಗ ಕಾಮಗಾರಿಗಳಿಗೆ ಅನುಮೋದನೆ ದೊರೆತಿರುವುದರಿಂದ ಸ್ಥಳೀಯರಲ್ಲಿ ಸಂತಸ ಮನೆಮಾಡಿದೆ. ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಜನರ ನಿರೀಕ್ಷೆ…! 

ಅನುಮೋದನೆ ಮಾತ್ರವಲ್ಲದೆ, ಕಾಮಗಾರಿಗಳು ಶೀಘ್ರ ಆರಂಭಗೊಂಡು ಪಾರದರ್ಶಕವಾಗಿ ಪೂರ್ಣಗೊಳ್ಳಬೇಕು. ಉತ್ತಮ ಗುಣಮಟ್ಟದ ರಸ್ತೆಗಳು ನಿರ್ಮಾಣವಾದರೆ ಗ್ರಾಮೀಣ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

Prajavikshane

Chandru R Bhanapaur

Leave a Reply

error: Content is protected !!