You are currently viewing PV NEWS : ಸಚಿವರ ಜಂಟಿ ಪರಿಶೀಲನೆ: ಬರದಿಂದ ಹಾನಿಗೊಳಗಾದ ಬೆಳೆಗಳ ವೀಕ್ಷಣೆ: ರೈತರೊಂದಿಗೆ ನೇರ ಸಂವಾದ • ಬೆಳೆ ವಿಮೆ ಮಾಹಿತಿ ಪರಿಶೀಲನೆ • ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಕೆ

PV NEWS : ಸಚಿವರ ಜಂಟಿ ಪರಿಶೀಲನೆ: ಬರದಿಂದ ಹಾನಿಗೊಳಗಾದ ಬೆಳೆಗಳ ವೀಕ್ಷಣೆ: ರೈತರೊಂದಿಗೆ ನೇರ ಸಂವಾದ • ಬೆಳೆ ವಿಮೆ ಮಾಹಿತಿ ಪರಿಶೀಲನೆ • ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಕೆ

PV NEWS : ಸಚಿವರ ಜಂಟಿ ಪರಿಶೀಲನೆ: ಬರದಿಂದ ಹಾನಿಗೊಳಗಾದ ಬೆಳೆಗಳ ವೀಕ್ಷಣೆ: ರೈತರೊಂದಿಗೆ ನೇರ ಸಂವಾದ • ಬೆಳೆ ವಿಮೆ ಮಾಹಿತಿ ಪರಿಶೀಲನೆ • ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಕೆ

ರೈತರೊಂದಿಗೆ ನೇರ ಸಂವಾದ • ಬೆಳೆ ವಿಮೆ ಮಾಹಿತಿ ಪರಿಶೀಲನೆ • ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಕೆ

ಕುಕನೂರು, ಆ. 6 (PV NEWS): ಜಿಲ್ಲೆಯಲ್ಲಿನ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ರಾಯರಡ್ಡಿ ಹಾಗೂ ಶಿವರಾಜ ಎಸ್. ತಂಗಡಗಿ ಅವರು ಗುರುವಾರ ಕುಕನೂರು ತಾಲೂಕಿನ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಜಂಟಿಯಾಗಿ ಪರಿಶೀಲಿಸಿದರು.

ಮಳೆಯ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ಅಧಿಕಾರಿಗಳೊಂದಿಗೆ ಖುದ್ದಾಗಿ ವೀಕ್ಷಿಸಿದ ಸಚಿವರು, ಬೆಳೆಗಳ ಸ್ಥಿತಿಗತಿ ಕುರಿತು ರೈತರಿಂದ ಮಾಹಿತಿ ಪಡೆದರು. ಬೆಳೆ ಎಷ್ಟು ತಿಂಗಳದ್ದು, ನಿರೀಕ್ಷಿತ ಇಳುವರಿ ಎಷ್ಟಿತ್ತು ಹಾಗೂ ಹಾನಿಯ ಪ್ರಮಾಣ ಎಷ್ಟಿದೆ ಎಂಬ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ರೈತರು ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆಯೇ ಎಂದು ಸಚಿವರು ವಿಚಾರಿಸಿದರು. ವಿಮೆ ಹಾಗೂ ಬೆಳೆ ಹಾನಿ ದಾಖಲಾತಿ ಸಂಬಂಧ ರೈತರಿಗೆ ಅಗತ್ಯ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆಯ ಬಳಿಕ ಮಾತನಾಡಿದ ಸಚಿವರು, ಸ್ಥಳೀಯ ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನ ಬೆಳೆ ಹಾನಿಯ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ವರದಿಯ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬರ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪರಿಶೀಲನೆ ವೇಳೆ ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!