BREAKING NEWS : ಇಂದು ಮೈಕ್ರೋ ಫೈನಾನ್ಸ್ ನ ಬೇಕಾಬಿಟ್ಟಿ ಹಣ ವಸೂಲಿಗೆ ಸರ್ಕಾರ ಬ್ರೇಕ್…!!
ಪ್ರಜಾವೀಕ್ಷಣೆ ನ್ಯೂಸ್ ಡೆಸ್ಕ್ : ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್ಗಳ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮೌಖಿಕವಗಿ ಸೂಚನೆ ನೀಡಿದ್ದರು. ಇದೀಗ ಪ್ರತ್ಯೇಕವಾಗಿ ಕಾನೂನು ಆಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ .
ಇದಕ್ಕೆ ಪುಷ್ಠಿ ನೀಡುವಂತೆ ಇಂದು ಮಹತ್ವದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ನಡೆಯಲಿದೆ. ಈ ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್ಗಳ ವಿರುದ್ಧ ಇಂದೇ ಸುಗ್ರೀವಾಜ್ಞೆ ಹೊರಬರಲಿದೆ ಎಂದು ತಿಳಿದು ಬಂದಿದೆ.