LOCAL NEWS : ಪೌರ ನೌಕರರ ಮುಷ್ಕರಕ್ಕೆ ದಲಿತ ಸಂಘಟನೆಗಳ ಬೆಂಬಲ..!
ಮುದಗಲ್ : ಪೌರ ಕಾರ್ಮಿಕರ ಬೇಡಿಕೆಗಳುನ್ನು ಈಡೇರಿಸಬೇಕೆಂದು ಪೌರ ಕಾರ್ಮಿಕರ ಮುದಗಲ್ ಪುರಸಭೆ ಕಚೇರಿ ಮುಂದೆ ನಡೆಸುತ್ತಿರುವ ಧರಣಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುದಗಲ್ ಘಟಕದ ಪದಾಧಿಕಾರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಮುಷ್ಕರದಿಂದಾಗಿ ವಿದ್ಯಾರ್ಥಿಗಳಿಗೆ ಜನನ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಪಟ್ಟಣ ಸ್ವಚ್ಛತೆ ಇಲ್ಲದೇ ಗಬ್ಬೇದ್ದು ನಾರುತ್ತಿದೆ. ಧರಣಿಯಿಂದ ಪಟ್ಟಣದ ನಾಗರೀಕರು ವಿವಿಧ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುದಗಲ್ ಘಟಕದ ಅಧ್ಯಕ್ಷ ಬಸವರಾಜ ಬಂಕದಮನಿ, ದಲಿತ ಪ್ಯಾಂಥರ್ಸ್ ಮುದಗಲ್ ಘಟಕದ ಅಧ್ಯಕ್ಷ ಕೃಷ್ಣ ಚಲವಾದಿ ಇತರರು ಇದ್ದರು.
ಪೌರ ಕಾರ್ಮಿಕರ ಬೇಡಿಕೆಗಳುನ್ನು ಈಡೇರಿಸಬೇಕೆಂದು ಪೌರ ಕಾರ್ಮಿಕರ ಮುದಗಲ್ ಪುರಸಭೆ ಕಚೇರಿ ಮುಂದೆ ನಡೆಸುತ್ತಿರುವ ಧರಣಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುದಗಲ್ ಘಟಕದ ಪದಾಧಿಕಾರಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು