BIG NEWS : ಪತ್ರಕರ್ತನಿಗೆ ಬೆದರಿಕೆ ಪ್ರಕರಣ : ಶಾಸಕ ರಾಯರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು..!

You are currently viewing BIG NEWS : ಪತ್ರಕರ್ತನಿಗೆ ಬೆದರಿಕೆ ಪ್ರಕರಣ : ಶಾಸಕ ರಾಯರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು..!

ಪ್ರಜಾ ವೀಕ್ಷಣೆ ಸುದ್ದಿ :-

BIG NEWS : ಪತ್ರಕರ್ತನಿಗೆ ಬೆದರಿಕೆ ಪ್ರಕರಣ : ಶಾಸಕ ರಾಯರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು..!


ಕೊಪ್ಪಳ : ಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಸಿಎಂ ಅವರ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿಯವರನ್ನು ಸಂಪರ್ಕಿಸಿದಾದ ಕೊಪ್ಪಳದ ಪತ್ರಕರ್ತ ಬಸವರಾಜ ಕರುಗಲ್ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್ನ ಸದಸ್ಯರು ಸಭೆ ನಡೆಸಿ, ರಾಯರಡ್ಡಿಯವರ ಮುಂದುವರಿದ ಈ ರೀತಿಯ ವರ್ತನೆಯನ್ನು ಖಂಡಿಸಿದರು.

ಅವರನ್ನು ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಹಿರಿಯ ರಾಜಕಾರಣಿ ಬಸವರಾಜ ರಾಯರಡ್ಡಿಯವರು ಪತ್ರಕರ್ತರೊಂದಿಗೆ ನಿರಂತರವಾಗಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸುದ್ದಿ ವಿಷಯವಾಗಿ ಪತ್ರಕರ್ತರು ಕರೆ ಮಾಡಿದಾಗ ಸಂಪಾದಕರಿಗೆ ದೂರು ನೀಡುವೆ, ಕೆಲಸದಿಂದ ತೆಗಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರಾಗಿಯೇ ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವೈರಲ್ ಆದಾಗ ಅದನ್ನು ಸಮರ್ಥಿಸುವ ಭರದಲ್ಲಿ ಪತ್ರಕರ್ತರು ಸುದ್ದಿ ತಿರುಚುತ್ತಾರೆ ಎಂದೆಲ್ಲ ಕೇವಲವಾಗಿ ನಿಂದಿಸುತ್ತಾರೆ.

ಕೊಪ್ಪಳ ಪತ್ರಕರ್ತರು ಯಾರೂ ಅವರ ಬಗ್ಗೆ ದ್ವೇಷ ಭಾವನೆ ಹೊಂದಿಲ್ಲ. ಸುದ್ದಿಗಾಗಿ ಅವರನ್ನು ಸಂಪರ್ಕಿಸುವ ಬಹುತೇಕ ಪತ್ರಕರ್ತರಿಗೆ ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ದರ್ಪದಿಂದ ಮಾತನಾಡುತ್ತಾರೆ. ಇದು ಹಲವಾರು ಬಾರಿ ಪುನರಾವರ್ತನೆ ಆಗುತ್ತಿದೆ. ಈ ಬಗ್ಗೆ ನಾವು ಸಾಕಷ್ಟು ಬಾರಿ ಅವರಿಗೆ ತಿಳಿಸಿದರೂ ಬದಲಾಯಿಸಿಕೊಳ್ಳುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರು ಯಲಬುರ್ಗಾ.

ಗ್ಯಾರಂಟಿ ವಿಷಯವಾಗಿ ಅವರು ಹೇಳಿದ ಹೇಳಿಕೆಗೆ ಪ್ರತಿಕ್ರಿಯೆ ಕೇಳಲು ಕರೆ ಮಾಡಿದ ಉದಯಕಾಲ ಪತ್ರಿಕೆ ಜಿಲ್ಲಾ ವರದಿಗಾರ, ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯ ಬಸವರಾಜ ಕರುಗಲ್ ಅವರಿಗೆ ‘ಏಯ್ ತಮ್ಮಾ ಯಾರ ಹತ್ರ ಮಾತಾಡ್ತಿದಿಯಾ ಅಂತ ಗೊತ್ತಾ ? ಯಾವ ಪತ್ರಿಕೆ ನಿಂದು, ನಿನ್ನ ಸಂಪಾದಕರಿಗೆ ದೂರು ನೀಡಿ, ಕೆಲಸದಿಂದ ತೆಗೆಸುವೆ.’ ಎಂಬ ಬೆದರಿಕೆ ಹಾಕಿದ್ದಾರೆ. ಅವರ ಈ ಮಾತನ್ನು ಕೊಪ್ಪಳ ಮೀಡಿಯಾ ಕ್ಲಬ್ ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಜನರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಮೀಡಿಯಾ ಕ್ಲಬ್ ಸದಸ್ಯರು ತಿಳಿಸಿದ್ದಾರೆ.

ಕೂಡಲೇ ಬಸವರಾಜ ರಾಯರಡ್ಡಿ ಅವರು ಪತ್ರಕರ್ತರಿಗೆ ಕ್ಷಮೆ ಕೇಳಬೇಕು. ಅವರನ್ನು ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ಎಲ್ಲ ಮಾಧ್ಯಮಗಳು ಬಸವರಾಜ ರಾಯರಡ್ಡಿ ಅವರ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸುದ್ದಿಗೋಷ್ಠಿಯನ್ನು ತಿರಸ್ಕರಿಸುವ ನಿರ್ಧಾರ ಕೈಗೊಂಡಿದ್ದು ಈ ಮೂಲಕ ಅವರ ವಿರುದ್ಧ ಅಸಹಕಾರ ಮುಂದುವರಿಸಲಾಗುವುದೆಂದು ಎಚ್ಚರಿಸಿದ್ದಾರೆ.

ಈ ವೇಳೆ ಮೀಡಿಯಾ ಕ್ಲಬ್ನ ಅಧ್ಯಕ್ಷ ರವೀಂದ್ರ ವಿ.ಕೆ., ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ್ ಬಾಚನಳ್ಳಿ, ಸದಸ್ಯರಾದ ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ, ಸಂತೋಷ ದೇಶಪಾಂಡೆ, ಮಾರುತಿ ಕಟ್ಟಿಮನಿ, ವಿನಾಯಕ, ಶರಣು ಹುಲಿಹೈದರ್, ದೊಡ್ಡೇಶ್ ಯಲಿಗಾರ, ಹುಸೇನ್ ಪಾಷಾ, ಪ್ರಕಾಶ, ಬಸವರಾಜ ಕರುಗಲ್, ಪ್ರಮೋದ ಕುಲಕರ್ಣಿ, ನಾಭಿರಾಜ ದಸ್ತೇನವರ್, ಜಗದೀಶ ಚಟ್ಟಿ, ಬಸವರಾಜ ಕರ್ಕಿಹಳ್ಳಿ, ವಿಠ್ಠಲ್ ಧುತ್ತರಗಿ ಇತರರು ಇದ್ದರು.

Leave a Reply

error: Content is protected !!