ಶಿವನ ಪ್ರೇರಣೆ ರಾಮತತ್ವ ಬಿತ್ತನೆ ರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮಕ್ಕೆ ಪಕ್ಷಕ್ಕೆ ಸೀಮಿತವಲ್ಲ :- ವಿನಯರಾಮ..

ಮುದಗಲ್ಲ ವರದಿ…

ಐತಿಹಾಸಿಕ ಮುದಗಲ್ಲ ಪಟ್ಟಣಕ್ಕೆ ಬಂದ ಬಾಲರಾಮ ಪಟ್ಟಣದ ವಾಸವಿ ಕಲ್ಯಾಣ ಮಂಟಪ, ನಗರೇಶ್ವರ ದೇವಸ್ಥಾನದಲ್ಲಿ 82 ನೇ ಪ್ರದಶ೯ನ…

ಶಿವನ ಪ್ರೇರಣೆ ರಾಮತತ್ವ ಬಿತ್ತನೆ ರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮಕ್ಕೆ ಪಕ್ಷಕ್ಕೆ ಸೀಮಿತವಲ್ಲ :- ವಿನಯರಾಮ..

ಮುದಗಲ್ಲ :- .ಪತ್ರಿಕೆಯೊಂದಿಗೆ ಮಾತನಾಡಿದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆ ಗ್ರಾಮದ ವಿನಯರಾಮ ಅವರು ಈ ಪ್ರದರ್ಶನದ ಹಿಂದೆ ಐದು ಉದ್ದೇಶಗಳಿವೆ. ಸನಾತನ ಧರ್ಮದ ಅರಿವು ಮೂಡಿಸುವ ಪ್ರಯತ್ನ, ರಾಮಾವತಾರದ ಉದ್ದೇಶ ಧರ್ಮ ಶಿಕ್ಷಣ, ಆತ್ಮಜ್ಞಾನದ
ಉಪದೇಶವಾಗಿತ್ತು. ರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮಕ್ಕೆ ಪಕ್ಷಕ್ಕೆ ಸೀಮಿತವಲ್ಲ. ಸೂರ್ಯ ಎಲ್ಲರಿಗೂ ಬೆಳಕು ಕೊಟ್ಟಂತೆ ಸೂರ್ಯ ವಂಶದ ರಾಮನ ಆದರ್ಶ ಎಲ್ಲರಿಗೂ ಬೇಕು.

ಸಮಾನತೆ ಹಂಚುವಲ್ಲಿ ಪಂಚತತ್ವದ ಪಾತ್ರ ಮತ್ತು ಅನುಕೂಲ ಇಲ್ಲದವರು,ವಯೋವೃದ್ಧರು ರಾಮ ಮಂದಿರವನ್ನು ಅಲ್ಲಿಗೆ ಹೋಗಿ ನೋಡಲಾಗದವರಿಗೆ ಅವರ ಸ್ಥಳದಲ್ಲಿಯೇ ನೋಡುವ ಸೌಭಾಗ್ಯ ಕಲ್ಪಿಸುವ ಉದ್ದೇಶದಿಂದ ಇದನ್ನು ಮಾಡುತ್ತಿರುವೆ ಎಂದರು.

ಇದೆ ನಿಮ್ಮ ಐತಿಹಾಸಿಕ ಮುದಗಲ್ಲ ಪಟ್ಟಣದ
ಸ್ಥಳೀಯ ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಪಟ್ಟಣದ ವಾಸವಿ ಕಲ್ಯಾಣ ಮಂಟಪ, ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆ ರಾಮ ಮಂದಿರ ಮತ್ತು ಬಾಲರಾಮನ ಮಾದರಿ ಪ್ರದರ್ಶನ ನಡೆಯುತ್ತದೆ ಪತ್ರಿದಿನ ಸಾಯಂಕಾಲ ಸಂಜೆ :- 05:30 ರಿಂದ ರಾತ್ರಿ :- 8:- 30 ರವರೆಗೆ ಪ್ರದರ್ಶನವು ಭಕ್ತರಿಗೆ ಲಭ್ಯವಿದೆ.

ಎಲ್ಲರಿಗೂ ಅಯೋಧ್ಯೆಗೆ ತೆರಳಿ ಶ್ರೀರಾಮ ಮಂದರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇವರು ಎಲ್ಲೆಡೆ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮೂರು ಮಹಡಿಯನ್ನು ನಿರ್ಮಿಸಲಾಗಿದ್ದು, ನೆಲಮಹಡಿಯಲ್ಲಿ ಬಾಲರಾಮನ ಭಾವಚಿತ್ರ ಇರಿಸಲಾಗಿದೆ. ಸುಮಾರು 80 ಕೆ.ಜಿ ತೂಕವಿದ್ದು ಇದಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದು, ಅಯೋಧ್ಯೆಯ ಶ್ರೀರಾಮ ಮಂದಿರ ಹೋಲಿಕೆ ಆಗುತ್ತಿದೆ.

ಇದು ಸಂಪೂರ್ಣ ಉಚಿತ ವಾಗಿದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಥರ್ಮಾಕೋಲ್, ಟೂತ್ ಪೀಕ್, ಅರ್ಕಾಲಿಕ್ ವಾಟರ್ ಪೇಂಟ್, ಗುಂಡುಸೂಜಿ ಹಾಗೂ ಫೆವಿಕಾಲ್ ಬಳಸಿ ತಯಾರಿಸಿದ್ದು, ವಿನಯ್ ರಾಮ ಅವರು ಸಿದ್ದಪಡಿಸಿದ್ದಾರೆ.

ನಾವು ಮೂಲತಃ ತುಮಕೂರಿನ ಗುಬ್ಬಿ ತಾಲ್ಲೂಕಿನವರು.
ಮಂದಿರವನ್ನು ತಯಾರಿಸಿದ್ದು ರಾಮನ ಆದರ್ಶ, ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯವನ್ನು ಕೈಗೊಂಡಿದ್ದು ನಿರಂತರ ಪ್ರಯಾಣ ಬೆಳೆಸುತ್ತಿದ್ದೇವೆ. ಉಚಿತವಾಗಿ 108 ಕಡೆ ಪ್ರದರ್ಶನವನ್ನು ನೀಡುವ ಸಂಕಲ್ಪವನ್ನು ಕೈಗೊಂಡಿದ್ದು, ಮೈಸೂರಿನ ನೋಟು ಮುದ್ರಣ ಸಂಸ್ಥೆಯಲ್ಲಿ, ಶೃಂಗೇರಿಯ ಮಠದಲ್ಲಿ, ಮಂತ್ರಾಲಯದಲ್ಲಿ, ಹೀಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನಗೊಂಡಿದ್ದು,

ಮುದಗಲ್ಲ ಪಟ್ಟಣದಲ್ಲಿ 82 ನೇ ಪ್ರದರ್ಶನವಾಗಲಿದೆ.
ರಾಜ್ಯದಾದ್ಯಂತ 108 ಸ್ಥಳಗಳಲ್ಲಿ ಅಯೋಧ್ಯೆ ರಾಮ ಮಂದಿರ ಮಾದರಿ ಪ್ರದರ್ಶನ ಮಾಡಲು ಸಂಕಲ್ಪಿಸಿದ್ದರು. ಈಗಾಗಲೇ ರಾಜ್ಯದ 82 ಕಡೆ 14 ಜಿಲ್ಲೆಗಳಲ್ಲಿ 34 ವಿವಿಧ ಮಠಮಾನ್ಯಗಳು ಸೇರಿದಂತೆ 82 ಸ್ಥಳಗಳಲ್ಲಿ ಪ್ರದರ್ಶನ ಮಾಡಿದ್ದೇವೆ ವಿನಯರಾಮ ಎಂದು ಮಾಹಿತಿ ನೀಡಿದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!