BIG NEWS : ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ : ಸಚಿವ ಡಾ. ಜಿ. ಪರಮೇಶ್ವರ್‌

You are currently viewing BIG NEWS : ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ : ಸಚಿವ ಡಾ. ಜಿ. ಪರಮೇಶ್ವರ್‌

ಪ್ರಜಾ ವೀಕ್ಷಣೆ ಸುದ್ದಿ :-

BIG NEWS : ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ : ಸಚಿವ ಡಾ. ಜಿ. ಪರಮೇಶ್ವರ್‌

ಕುಕನೂರು : ‘ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ಅವರ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ ಎಂದು ಗೃಹ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆ ಮುಂದೆ ಸಚಿವರುಗಳು

ಇಂದು ತಾಲೂಕಿನ ಶೀರೂರು ಗ್ರಾಮದಲ್ಲಿ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದಶಿಸಿ ಮಾತನಾಡಿದ ಅವರು, ‘ದಿ. ಕೆ.ಎಚ್.ಪಾಟೀಲ್‌ ಸಾಹೇಬ್ರ ಬದುಕು ಸಂಘರ್ಷದಿಂದ ಕೂಡಿತ್ತು, ನಿರಂತರ ಅವರು ರೈತರು,ಬಡವರು, ಕಾರ್ಮಿಕರ ಪರ ಹೋರಾಟಗಳನ್ನು ಮಾಡುತ್ತಿದ್ದರು. ನಮ್ಮಂತ ಎಷ್ಟೋ ರಾಜಕಾರಣಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ರಾಜಕಾರಣದಲ್ಲಿ ಅವರಿಗೆ ‘ಶಿಸ್ತಿನ ಸಿಪಾಯಿ’ ಎಂದೇ ಕರೆಸಿಕೊಳ್ಳುತ್ತಿದ್ದರು. ಅವರಿಗೆ ಈ ಭಾಗದ ಜನತೆಗೆ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿವರಾಗಿದ್ದಾರೆ. ಪುನರ್ವಸತಿ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರಲ್ಲಿ ಇವರದ್ದು ಮಹತ್ವದ ಪಾತ್ರವಿದೆ ಎಂದರು.

ads place

ಹಿರೇಹಳ್ಳ ಡ್ಯಾಂ ಹಿನ್ನೀರು ಸಂಗ್ರಹಗೊಂಡರೇ ಪ್ರವಾಹದ ಭೀತಿ ಇತ್ತು, ಶಿರೂರು, ಮುತ್ತಾಳ, ವೀರಾಪೂರ ಹಾಗೂ ಮುದ್ಲಾಪೂರ ಈ ನಾಲ್ಕು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಲು ಸಹಕಾರ ನೀಡಿದ್ದ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಅಭಿನಂದನಾ ಪೂರಕವಾಗಿ ಅವರ ತಂದೆಯವರಾದ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆ ಇಂದು ತಾಲೂಕಿನ ಶಿರೂರು ಪುನರ್ವಸತಿ ಗ್ರಾಮದಲ್ಲಿ ಅನಾವರಣಗೊಂಡಿತು.

ads place

2002ರಲ್ಲಿ ಸುರಿದ ಭಾರಿ ಮಳೆಗೆ ಶಿರೂರು, ವೀರಾಪುರ, ಮುತ್ತಾಳ ಹಾಗೂ ಮುದ್ಲಾಪುರ ಗ್ರಾಮಗಳಲ್ಲಿ ನೀರು ನಿಂತು ಮನೆಗಳು ಕುಸಿದಿದ್ದವು. ಆಗ ಈ ಗ್ರಾಮಗಳನ್ನು ಪುನರ್ವಸತಿಯನ್ನಾಗಿ ಮಾಡಲು ಅಂದು ಶಾಸಕರಾಗಿದ್ದ ಬಸವರಾಜ ರಾಯರಡ್ಡಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಅಂದಿನ ಸಿಎಂ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಚ್.ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿ, ನಂತರ ಈ ಗ್ರಾಮಗಳನ್ನು ಶೀತ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಕೊಂಡರು ಬಳಿಕ ಪುನರ್ವಸತಿ ಗ್ರಾಮಗಳಿಗೆ 240 ಕೋಟಿ ರೂ. ಅನುದಾನ ನೀಡಿದರು ಎಂದರು.

Leave a Reply

error: Content is protected !!