BIG NEWS : ವೀರಶೈವ ಮಠಾಧೀಶ ಡಾ. ಶರಣಬಸಪ್ಪ ಅಪ್ಪ ಅವರ ಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ..!
ಕಲಬುರ್ಗಿ : ಕಲ್ಯಾಣ ಕರ್ನಾಟಕದ ಪ್ರಸಿದ್ಧ ವೀರಶೈವ ಮಠಾಧೀಶ ಹಾಗೂ ಸಮಾಜಸೇವಕ ಡಾ. ಶರಣಬಸಪ್ಪ ಅಪ್ಪ ಅವರವನ್ನು ವೀರಶೈವ ಸಂಪ್ರದಾಯದ ವಿಧಿ ವಿಧಾನಗಳಂತೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಅಂತ್ಯಸಂಸ್ಕಾರ ನಡೆದಿದ್ದು, ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ವಿವಿಧೆಡೆಯ ಮಠಾಧೀಶರು ಭಾಗವಹಿಸಿ ಪೂರ್ಣ ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಟುಂಬ ಸದಸ್ಯರ ಹೃದಯವಿದ್ರಾವಕ ಆಕ್ರಂಧನ, ಭಕ್ತ ಸಮೂಹದ ಭಾವಪೂರ್ಣ ಜಯಘೋಶಗಳ ನಡುವೆ ಅಂತ್ಯಕ್ರಿಯೆ ಸಂಪನ್ನವಾಗಿದೆ.
ಭೂಮಿ ಒಳಗಡೆ ಸಮಾಧಿ ನಿರ್ಮಿಸಿ, ಐದು ಸಾವಿರ ವಿಭೂತಿ, ಲಕ್ಷ ಬಿಲ್ವಪತ್ರೆಗಳೊಂದಿಗೆ ಹಾಗೂ ವಿಶೇಷ ಅರ್ಚನೆ ನಡೆಸಿ ಶಾಶ್ವತ ಸಮಾಧಿ ಮಾಡಲಾಯಿತು. ಡಾ. ಶರಣಬಸಪ್ಪ ಅಪ್ಪ ಅವರ ಸಮಾಧಿ, ಅವರ ತಂದೆ ಹಾಗೂ 7ನೇ ಪೀಠಾಧಿಪತಿ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿ ಪಕ್ಕದಲ್ಲೇ ಇವರ ನಿರ್ಮಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ರಾಜ್ಯದ ರಾಜಕೀಯ ಮುಖಂಡರು, ಧಾರ್ಮಿಕ ಗಣ್ಯರು ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.