BREAKING : ಆಗಸ್ಟ್‌15 ರಂದು ಜಿಲ್ಲಾ ಕೇಂದ್ರದಲ್ಲಿ “ಸ್ವಾತಂತ್ರ್ಯ ದಿನದಂದು” ಧ್ವಜಾರೋಹಣಕ್ಕೆ ಸಚಿವರನ್ನು ನೇಮಿಸಿ ಸರ್ಕಾರ ಆದೇಶ!

You are currently viewing BREAKING : ಆಗಸ್ಟ್‌15 ರಂದು ಜಿಲ್ಲಾ ಕೇಂದ್ರದಲ್ಲಿ “ಸ್ವಾತಂತ್ರ್ಯ ದಿನದಂದು” ಧ್ವಜಾರೋಹಣಕ್ಕೆ ಸಚಿವರನ್ನು ನೇಮಿಸಿ ಸರ್ಕಾರ ಆದೇಶ!

BREAKING : ಆಗಸ್ಟ್‌15 ರಂದು ಜಿಲ್ಲಾ ಕೇಂದ್ರದಲ್ಲಿ “ಸ್ವಾತಂತ್ರ್ಯ ದಿನದಂದು” ಧ್ವಜಾರೋಹಣಕ್ಕೆ ಸಚಿವರನ್ನು ನೇಮಿಸಿ ಸರ್ಕಾರ ಆದೇಶ!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಮುಂದಿನ ತಿಂಗಳು ಆಗಸ್ಟ್.15ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಮಾಡಿದೆ.

ಈ ಬಗ್ಗೆ ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆಗಸ್ಟ್.15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಈ ಕೆಳಗೆ ಸೂಚಿಸಿದಂತೆ ಮಂತ್ರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡುತ್ತಾರೆಂದು ಇಲ್ಲಿದೆ ಮಾಹಿತಿ…

ಡಾ.ಜಿ ಪರಮೇಶ್ವರ್ – ತುಮಕೂರು, ಹೆಚ್.ಕೆ ಪಾಟೀಲ್ – ಗದಗ, ಕೆ.ಹೆಚ್ ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ, ಎಂ.ಬಿ ಪಾಟೀಲ್ – ವಿಜಯಪುರ, ಕೆಜೆ ಜಾರ್ಜ್ – ಚಿಕ್ಕಮಗಳೂರು, ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ, ಡಾ.ಹೆಚ್ ಸಿ ಮಹದೇವಪ್ಪ – ಮೈಸೂರು, ಸತೀಶ್ ಜಾರಕಿಹೊಳಿ – ಬೆಳಗಾವಿ, ಕೃಷ್ಣ ಬೈರೇಗೌಡ – ಬಳ್ಳಾರಿ, ಪ್ರಿಯಾಂಕ್ ಖರ್ಗೆ – ಕಲಬುರ್ಗಿ, ಶಿವಾನಂದ ಪಾಟೀಲ್ – ಹಾವೇರಿ, ಜಮೀರ್ ಅಹ್ಮದ್ ಖಾನ್ – ವಿಜಯನಗರ, ಶರಣಬಸಪ್ಪ ದರ್ಶನಾಪುರ – ಯಾದಗಿರಿ, ಈಶ್ವರ್ ಖಂಡ್ರೆ – ಬೀದರ್, ಎನ್ ಚಲುವರಾಯಸ್ವಾಮಿ -ಮಂಡ್ಯ, ಎಸ್ ಎಸ್ ಮಲ್ಲಿಕಾರ್ಜುನ – ದಾವಣಗೆರೆ, ಸಂತೋಷ್ ಲಾಡ್ – ಧಾರವಾಡ, ಡಾ.ಶರಣಪ್ರಕಾಶ್ ಪಾಟೀಲ್ –ರಾಯಚೂರು, ಆರ್ ಬಿ ತಿಮ್ಮಾಪುರ – ಬಾಗಲಕೋಟೆ, ಕೆ.ವೆಂಕಟೇಶ್ – ಚಾಮರಾಜನಗರ, ಶಿವರಾಜ್ ತಂಗಡಗಿ – ಕೊಪ್ಪಳ, ಡಿ.ಸುಧಾಕರ್ – ಚಿತ್ರದುರ್ಗ, ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ, ಎನ್ ರಾಜಣ್ಣ – ಹಾಸನ, ಸುರೇಶ್ ಬಿಎಸ್ -ಕೋಲಾರ, ಮಂಕಾಳ ವೈದ್ಯ – ಉತ್ತರ ಕನ್ನಡ, ಮಧು ಬಂಗಾರಪ್ಪ – ಶಿವಮೊಗ್ಗ, ಡಾ ಎಂ ಸಿ ಸುಧಾಕರ – ಚಿಕ್ಕಬಳ್ಳಾಪುರ, ಎನ್ ಎಸ್ ಬೋಸರಾಜು – ಕೊಡಗು.

ಒಂದು ವೇಳೆ ಈ ಮೇಲ್ಕಂಡ ಸಚಿವರು ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಧ್ವಜಾರೋಹಣಕ್ಕೆ ಗೈರಾದರೇ ಅವರ ಅನುಪಸ್ಥಿತಿಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡತಕ್ಕದ್ದು ಎಂದು ಆದೇಶ ಮಾಡಲಾಗಿದೆ.

Leave a Reply

error: Content is protected !!