BREAKING : ಸೌಜನ್ಯ ಮನೆಗೆ ಭೇಟಿ ವಿಚಾರ : ‘ಬಿಗ್ ಬಾಸ್’ ಖ್ಯಾತಿಯ ರಜತ್ ದಂಪತಿಗೆ ಜೀವ ಬೆದರಿಕೆ ಮೆಸೇಜ್ : ದೂರು ದಾಖಲು.!..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಬಿಗ್ ಬಾಸ್ ಖ್ಯಾತಿಯ ರಜತ್ ದಂಪತಿಗೆ ಕೇಲವರು ಜೀವ ಬೆದರಿಕೆ ಸಂದೇಶ ಕಳುಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ದಾಖಲಾಗಿದೆ.
ಧರ್ಮಸ್ಥಳದ ಪ್ರಕರಣದ ವಿಚಾರವಾಗಿ ತಮಗೆ ಜೀವ ಬೆದರಿಕೆ ಸಂದೇಶ ಬರುತ್ತಿದೆ ಎಂದು ಆರೋಪಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಜತ್ ಹಾಗೂ ಪತ್ನಿ ಅಕ್ಷತಾ ದೂರು ನೀಡಿದ್ದಾರೆ.
“ನಾವು ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡಿಲ್ಲ. ಕೇವಲ ಸೌಜನ್ಯ ಪರ ನ್ಯಾಯಕ್ಕಾಗಿ ಭೇಟಿ ನೀಡಿದ್ದೆವು. ನನ್ನನ್ನ ಕತ್ತರಿಸುತ್ತೀನಿ ಎಂದು ಕೆಲವರು ಬೆದರಿಕೆ ಹಾಕಿದರು. ನನ್ನೊಂದಿಗೆ ಇದ್ದ ಕೆಲವರು ಯೂಟ್ಯೂಬರ್ಸ್ ಗಳು ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ” ಎಂದು ರಜತ್ ಅವರ ದೂರಿನ ಸಾರಾಂಶ ಇದಾಗಿದೆ.