ಮುದಗಲ್ಲ :- ಥ್ರೋಬಾಲ್ ಪಂದ್ಯಾವಳಿ: ಕ್ರಿಸ್ತ ಜ್ಯೋತಿ ಪ್ರೌಡ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ…

ಮುದಗಲ್ಲ ವರದಿ..

ಥ್ರೋಬಾಲ್ ಪಂದ್ಯಾವಳಿ: ಕ್ರಿಸ್ತ ಜ್ಯೋತಿ ಪ್ರೌಡ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ…

ಮುದಗಲ್ಲ :-ಸ್ಥಳೀಯ ಕ್ರಿಸ್ತ ಜ್ಯೋತಿ ಪ್ರೌಡ ಶಾಲೆ 2025-26 ನೇ ಸಾಲಿನ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ
ಸ್ಥಳೀಯ ಕ್ರಿಸ್ತ ಜ್ಯೋತಿ ಪ್ರೌಡ ಶಾಲೆ ಬಾಲಕಿ ಯರ ತಂಡ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಲಕಿಯ ವಿಭಾಗದಲ್ಲಿ ಸತತವಾಗಿ ಆರನೇ ಸ್ಥಾನ ಪಡೆದಿದ್ದಾರೆ ಮುಂಬರುವ ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಗೆ ಕೀರ್ತಿತಂದ ಈ ಎಲ್ಲಾ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಉತ್ತಮವಾಗಿತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕಾದ ರಮೇಶ ದೀಷೀತ್,ಹಾಗೂಸಂಚಾಲಕ ರಾದ ಅನ್ನಮ್ಮ ಕ್ರಿಸ್ತ ಜ್ಯೋತಿ ಪ್ರೌಡ ಶಾಲೆ ಮುಖ್ಯೋಪಾಧ್ಯಾಯಿನಿಯರಾದ ವಂ ಸಿ ಮರಿಯಮ್ಮ, ಹಾಗೂ ಶಾಲಾ ಸಿಬ್ಬಂದಿಳಾದ ದಕ್ಷಾಯಣೆ, ಕಲ್ಪನಾ, ಚೌರಮ್ಮ,ಸಮೀರಾ,ಹಾಗೂ ಸುಪ್ರೀಯಾ,ಅಲ್ತಾಫ್, ಹಾಗೂ ಆರ್ ಸಿ ಮಿ,ಶಾಲೆಯ ಸುಲೋಚನಾ,ರವರು ಹರ್ಷ ವ್ಯಕ್ತಪಡಿಸಿದ್ದಾರೆ.

ಥೋಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ
ನೀಡಿದ ದೈಹಿಕ ಶಿಕ್ಷಕರಾದ ಶ್ರೀ ರಮೇಶ ದೀಷೀತ್ ರವರಿಗೆ,
ಸಹಕಾರ ಹಾಗೂ ಪ್ರೋತ್ಸಾಹ ನೀಡಿದ ಶಾಲೆಯ
ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು, ಪಾಲಕರು,
ಊರಿನ ಗುರು ಹಿರಿಯರು, ಹಳೆಯ ವಿದ್ಯಾರ್ಥಿಗಳು,ಶಿಕ್ಷಣ ಪ್ರೇಮಿಗಳು, ಯುವಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿ, ಶುಭಾಶಯ ಕೋರಿದ್ದಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!