ಪ್ರಜಾ ವೀಕ್ಷಣೆ ಸುದ್ದಿ :
LOCAL BREAKING : ಕುಕನೂರಿನಲ್ಲಿ ಬೀಕರ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಮೃತ..!

ಕುಕನೂರು : ಪಟ್ಟಣದ ಜವಾಹರ ನವೋದಯ ಶಾಲೆಯ ಹತ್ತಿರ ಭೀಕರ ರಸ್ತೆ ಅಪಘಾತವಾಗಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ReNew ಕಂಪನಿಯ ಕೂಲಿ ಕಾರ್ಮಿಕ ತಮ್ಮ ಕೆಲಸ ಮುಗಿಸಿ ಕುಕನೂರಿನಿಂದ ಗುದ್ನೇಪ್ಪನ ಮಠದ ಕಡೆಗೆ ಹೋಗುವ ವೇಳೆ ಚಲಿಸುತ್ತಿರುವ ಟ್ಯಾಕ್ಟರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿ ಪಶ್ಚಿಮ ಬಂಗಾಳದ ಕಲ್ಕತ್ತಾ ಮೂಲದವನು ಪಾರಿತೋಷ್ ಬಸಕ್ (ವಯಸ್ಸು 40 ವರ್ಷ) ಎಂದು ಗುರುತಿಸಲಾಗಿದೆ.
