ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ಅನ್ನಭಾಗ್ಯ ಯೋಜನೆಯಲ್ಲಿ ಸಿದ್ಧರಾಮಯ್ಯ ಬದಲಾವಣೆ ಮಾಡಿದ್ದು, ಭ್ರಷ್ಟಾಚಾರ ಮಾಡಲು : ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆರೋಪ

ಕುಕನೂರು : ‘ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರ್ಪಾಡು ಮಾಡಿದ್ದು, ಭ್ರಷ್ಟಾಚಾರ ಮಾಡಿ, ಬಡವರ ದುಡ್ಡು ಕಬಳಿಸಲು ಹೊಸ ಮಾರ್ಗ’ ಎಂದು ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆರೋಪಿಸಿದ್ದಾರೆ.
ಕುಕನೂರ ಪಟ್ಟಣದಲ್ಲಿ ಪ್ರಜಾ ವೀಕ್ಷಣೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಈ ಮೊದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅರ್ಹ ಬಡ ಫಲಾನುಭವಿಗಳಿಗೆ ತಲಾ 5 ಕೆ. ಜಿ.ಅಕ್ಕಿ ಹಾಗೂ ಪ್ರತಿಯೊಬ್ಬರಿಗೂ 170 ರೂಪಾಯಿಗಳಂತೆ ಕುಟುಂಬ ಸದಸ್ಯರ ಲೆಕ್ಕಾಚಾರದಂತೆ DBT ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ನಂತರ ಹಣ ಹಾಕುವ ಯೋಜನೆ ನಿಲ್ಲಿಸಿ ತಲಾ 10 ಕೆ. ಜಿ. ಪಡಿತರ ವಿತರಿಸುವ ಕಾರ್ಯವನ್ನು ಮಾಡುವ ಮೂಲಕ ಮಾರ್ಪಾಡು ಮಾಡಿತು. ಇದೀಗ ಬಡವರ ಹೊಟ್ಟೆ ಮೇಲೆ ಕಲ್ಲು ಎಳೆದು ತನ್ನ ಹಿಂಬಾಲಕರಿಗೆ ದುಡ್ಡು ಮಾಡಿಕೊಡುವ “ಇಂದಿರಾ ಕಿಟ್” ಎಂಬ ಹೊಸ ಯೋಜನೆ ರೂಪಿಸಿ ಜನರಿಗೆ ಮಂಕು ಬೂದಿ ಎರಚುವ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಹಾಕಿದ್ದು ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ಹೋರಹಾಕಿದರು.
