You are currently viewing LOCAL EXPRESS : ನಾಳೆ ಗುದ್ನೇಶ್ವರನ ಆಸ್ತಿ ಉಳಿವಿಗಾಗಿ ಹೋರಾಟ : “ದೇವಸ್ಥಾನದ ಜಮೀನನ್ನು ಬಿಟ್ಟು ಕೊಡುವ ಪ್ರಮೇಯವೇ ಇಲ್ಲ” : ಬಳೂಟಗಿ!

LOCAL EXPRESS : ನಾಳೆ ಗುದ್ನೇಶ್ವರನ ಆಸ್ತಿ ಉಳಿವಿಗಾಗಿ ಹೋರಾಟ : “ದೇವಸ್ಥಾನದ ಜಮೀನನ್ನು ಬಿಟ್ಟು ಕೊಡುವ ಪ್ರಮೇಯವೇ ಇಲ್ಲ” : ಬಳೂಟಗಿ!

ಪ್ರಜಾ ವೀಕ್ಷಣೆ ಸುದ್ದಿ :

LOCAL EXPRESS : ನಾಳೆ ಗುದ್ನೇಶ್ವರನ ಆಸ್ತಿ ಉಳಿವಿಗಾಗಿ ಹೋರಾಟ : “ದೇವಸ್ಥಾನದ ಜಮೀನನ್ನು ಬಿಟ್ಟು ಕೊಡುವ ಪ್ರಮೇಯವೇ ಇಲ್ಲ” : ಬಳೂಟಗಿ

ಕುಕನೂರು : ಪಟ್ಟಣದ ರುದ್ರಮುನೇಶ್ವರ (ಗುದ್ನೇಶ್ವರ) ಮಠದ ಜಮೀನು ಉಳಿವಿಗಾಗಿ ನಾಳೆ (ಶುಕ್ರವಾರ) ಗುದ್ನೇಶ್ವರ ಮಠದಿಂದ ಪಟ್ಟಣದ ವೀರಭದ್ರಪ್ಪ ವೃತ್ತದ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಶ್ರೀ ಗುದ್ನೇಶ್ವರ ಸ್ವಾಮಿಯ ಭಕ್ತ ಮಂಡಳಿ ತಿಳಿಸಿದ್ದಾರೆ.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುದ್ನೇಶ್ವರ ಸ್ವಾಮಿಯ ಜಮೀನಿನ ವಿಚಾರವಾಗಿ ಶ್ರೀ ಗುದ್ನೇಶ್ವರ ಸ್ವಾಮಿಯ ಭಕ್ತರ ಮಂಡಳಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ನಾಳೆ ಶುಕ್ರವಾರ 10 ಗಂಟೆಗೆ ಮಠದಿಂದ ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದವರೆಗೂ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರ ಮುಖಾಂತರ ಮಠದ ಜಮೀನು ಉಳಿವಿಗಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

 ಈ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋರ್ ಸೇನಾ ಕರ್ನಾಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿಯವರು, ‘ದೇವಸ್ಥಾನದ ಜಮೀನನ್ನು ಬಿಟ್ಟು ಕೊಡುವ ಪ್ರಮೇಯವೇ ಇಲ್ಲ, ಈ ಜಮೀನು ಗುದ್ನೇಶ್ವರ ಜಾತ್ರೆಗೆ ಬಹಳ ಅವಶ್ಯಕತೆ ಇದೆ, ಹಾಗಾಗಿ ತಾಲೂಕ ಆಡಳಿತ ಕಚೇರಿಗಳು ಬೇರೆ ಕಡೆಗೆ ಮಾಡಿ ಎಂದು ಒತ್ತಾಯ ಮಾಡಿದರು.

‘ಶ್ರೀ ಗುದ್ನೇಶ್ವರ ಸ್ವಾಮಿಯ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಸಲ್ಲದ ಆರೋಪ ಮಾಡಿ ಗ್ರಾಮಸ್ಥರ ಮೇಲೆ ಕೇಸ್ ಹಾಕಿದ್ದು, ಕಾನೂನು ಬಾಹಿರವಾಗಿದೆ. ಅವರ ಬೆಂಬಲಕ್ಕೆ ಇಡೀ ಜಿಲ್ಲೆಯ ಜನ ನಿಂತಿದ್ದಾರೆ.

 ‘ಶ್ರೀ ಗುದ್ನೇಶ್ವರ ಸ್ವಾಮಿಯ ಜಮೀನು ವಿಚಾರ ಈಗಾಗಲೇ ಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪ್ರೇರಿತವಾಗಿ ತಾಲೂಕ ಆಡಳಿತ ಕಚೇರಿಯ ಕಟ್ಟಡದ ವಿಚಾರ ಇಟ್ಟುಕೊಂಡು ಕೆಲ ದಿನಗಳ ಹಿಂದೆ “ಬೃಹತ್ ಕುಕನೂರು ಬಂದ್” ಪ್ರತಿಭಟನೆಯನ್ನು ಮಾಡಿದ್ದರು, ಇದರ ಹಿನ್ನೆಲೆಯಲ್ಲಿ ಗುದ್ದೇಶ್ವರ ಸ್ವಾಮಿಯ ಸೇವಾದಾರರು ಹಾಗೂ ಅರ್ಚಕರು ಸೇರಿ ಪತ್ರಿಕಾಗೋಷ್ಠಿಯನ್ನು ಕರೆದು, ಈ ಜಮೀನಿಗೆ ಸಂಬಂಧಿಸಿದಂತೆ ಕೆಲ ತಪ್ಪು ತಿಳುವಳಿಕೆಗಳು ತಾಲೂಕಿನಲ್ಲಿ ನಡೆಯುತ್ತಿದ್ದಾವೆ ಜೊತೆಗೆ ಸ್ವಾಮಿಯ ಸೇವಾದಾರರು ಹಾಗೂ ಅರ್ಚಕರಿಗೆ ಸಂಬಂಧಿಸಿದಂತ ಜಮೀನು, ಧಾರ್ಮಿಕ ದತ್ತಿ ಇಲಾಖೆ ಎಂದು ಸರ್ಕಾರ ಹೇಳುತ್ತಿರುವಾಗ ತದನಂತರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಹೈಕೋರ್ಟಿಗೆ ಪಿಟಿಷನ್ ಅರ್ಜಿಯನ್ನ ಸಲ್ಲಿಸಲಾಗಿತ್ತು.

ಅದಾದ ಮೇಲೆ ಈ ಜಮೀನಿನಲ್ಲಿ ಯಾವುದೇ ರೀತಿ ಕಟ್ಟಡ ಕಾಮಗಾರಿಗಳು ಅಥವಾ ಚಟುವಟಿಕೆಗಳು ನಡೆಯಬಾರದೆಂದು ಮಾನ್ಯ ಹೈಕೋರ್ಟ್ ಯಿಂದ ತಡೆ ಆಜ್ಞೆಯನ್ನು ತರಲಾಗಿತ್ತು, ಈ ಎಲ್ಲಾ ವಿಷಯಗಳು ಗಮನದಲ್ಲಿ ಇದ್ದರೂ ಸಹ, ರಾಜಕೀಯ ಪ್ರೇರೇಪಿತ ಕೆಲವು ಜನರು ಹಾಗೂ ಜನಪ್ರತಿನಿಧಿಗಳು ಶ್ರೀ ಗುದ್ನೇಶ್ವರ ಸ್ವಾಮಿಯ ಜಮೀನಿನಲ್ಲಿ ಸರ್ಕಾರಿ ಕಟ್ಟಡವಾಗಬೇಕೆಂದು ಪ್ರತಿಭಟನೆ ಮಾಡಿದ್ದರು. ಈ ವಿಚಾರಕ್ಕೆ ಪ್ರತಿರೋಧವಾಗಿ ಹೇಳಿಕೆಗಳನ್ನು ಕೊಟ್ಟಂತಹ ಗ್ರಾಮಸ್ಥರ ಮೇಲೆ ‘ಶಾಂತಿ ಭಗ್ನ ಮತ್ತು ಗಲಬೆ’ಯನ್ನ ಎಬ್ಬಿಸುತ್ತಿರುವುದಕ್ಕಾಗಿ 126ಕಲಂ ಅಡಿಯಲ್ಲಿ ಸಮನ್ಸ್ ಜಾರಿ ಮಾಡಿದ್ದು, ಎಷ್ಟರಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರು ಪ್ರಶ್ನೆ ಮಾಡಬೇಕಾಗಿದೆ? ಎಂದರು.

 *ಸಮನ್ಸ್ ಜಾರಿಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ* : ಮಹಿಳೆಯರು ಕಣ್ಣೀರು…!! : ಸುರೇಶ್ ಬಳೂಟಗಿ 

‘ಗುದ್ನೇಶ್ವರ ಮಠದ ಜನರ ಮೇಲೆ ಹಲವಾರು ಕೇಸ್ಗಳು ದಾಖಲಿಸಲಾಗಿದ್ದು, ಅವರನ್ನ ಭಯದ ವಾತಾವರಣದಲ್ಲಿ ತಳ್ಳಲಾಗಿದೆ. ಇದರಿಂದ ಮನನೊಂದ ಮಹಿಳೆಯರು ಕಣ್ಣೀರಿನಲ್ಲಿ ಕೈ ತೊಳೆಯುವಂತ ವಾತಾವರಣ ಕೂಡ ನಿರ್ಮಾಣವಾಗಿದೆ. ಇದು ಎಷ್ಟರಮಟ್ಟಿಗೆ ಸರಿ? ಹಾಗಾಗಿ ಇದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಜೊತೆಗೆ ಅವರ ಬೆಂಬಲಕ್ಕೆ ಹಾಗೂ ಕಾನೂನು ಹೋರಾಟಕ್ಕೆ ನಾವು ಕೂಡ ಸಾತ್ ನೀಡುತ್ತಿದ್ದೇವೆ. ಈಗಾಗಲೇ ದೇವಸ್ಥಾನದ ಜಮೀನಿನಲ್ಲಿ ನವೋದಯ ವಸತಿ ಶಾಲೆ, ಸರ್ಕಾರಿ ಪದವಿ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗಾಗಿ ಸಾಕಷ್ಟು ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಇನ್ನುಳಿದ ಭೂಮಿಯ ರಕ್ಷಣೆ ಅವಶ್ಯಕವಾಗಿದೆ ಜೊತೆಗೆ ಸೇವಾದಾರರು ಹಾಗೂ ಅರ್ಚಕರು ಈ ಜಮೀನಿನ ಉಪಯೋಗದಿಂದ ಜೀವನ ಕಟ್ಟಿಕೊಂಡಿದ್ದು, ಜಾತ್ರೆಯ ಸಂದರ್ಭದಲ್ಲಿ ಬರುವ ಭಕ್ತರಿಗೆ ಅನುಕೂಲಕರವಾಗಿದೆ. ಜಮೀನನ್ನು ಕಟ್ಟಡಕ್ಕೆ ಬಳಸಿಕೊಂಡಲ್ಲಿ ಜಾತ್ರೆಗೆ ಬರುವ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಸಹಸ್ರಾರು ಭಕ್ತರ ಬಳಕೆಗೆ ಈ ಜಮೀನನ್ನು ಮೀಸಲಿಡಬೇಕೆಂದು’ ಸುರೇಶ ಬಾಳೂಟಗಿ ಒತ್ತಾಯಿಸಿದರು.

ಭಕ್ತರಾದ ಮಂಜುನಾಥ ನಾಡಗೌಡ ಮಾತನಾಡಿ, ‘ಕಳೆದ ಸೋಮವಾರ ಪಟ್ಟಣದಲ್ಲಿ “ಕುಕನೂರ ಬಂದ್” ಮಾಡಿ ಪ್ರತಿಭಟನೆ ಮಾಡಿದ್ದು, ಸರ್ಕಾರದ ವಿರುದ್ಧ ವಿರೋಧ ಪಾಳಯದವರು ಬಂದು ಕರೆ ನೀಡುವುದು ಸಹಜ. ಆದರೆ ಇಲ್ಲಿ ಯಾರು, ಯಾರ ವಿರುದ್ಧ ಬಂದು ಕರೆ ನೀಡಿದರು ಎಂಬುದೇ ಗೊಂದಲಮಯವಾಗಿದೆ. ಇದರಿಂದ 18 ಕುಟುಂಬಗಳು ಬೀದಿಗೆ ಬರುವ ಅವಕಾಶಗಳಿದ್ದು, ಸೇವಾದಾರರು ಮತ್ತು ಅರ್ಚಕರನ್ನು ರಕ್ಷಿಸಬೇಕಾಗಿದೆ. ಐತಿಹಾಸಿಕ ಕುರುಹುಗಳನ್ನು ಗುದ್ದಪ್ಪನ ಮಠದ ಉಳಿವಿಗಾಗಿ ಎಲ್ಲರೂ ಸಹಕರಿಸಬೇಕು, ಜೊತೆಗೆ ಈ ಪ್ರಕರಣವು ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ಪ್ರಕರಣದ ಗೆಲುವು ಗುದ್ನೇಪ್ಪನ ಮಠದ ಸೇವಾದಾರರು ಹಾಗೂ ಅರ್ಚಕರ ಪರವಾಗಿ ಬರಲಿದೆ ಎಂದು ಸಂಪೂರ್ಣ ವಿಶ್ವಾಸವಿದೆ. ನ್ಯಾಯಾಂಗದ ವಿರುದ್ಧವಾದ ಅಭಿವೃದ್ಧಿ ಉತ್ತಮವೆ’ ಎಂದು ಪ್ರಶ್ನಿಸಿದರು.

     “ಪತ್ರಿಕಾಗೋಷ್ಠಿ ನಡೆಸುವುದು ಹಾಗೂ ಬ್ಯಾನರ್ ಹಾಕುವುದು ಶಾಂತಿಭಂಗಕ್ಕೆ ಕಾರಣವಾಗಿದೆ ಎಂದು ಹೇಳಿ ಸಮನ್ಸ್ ಜಾರಿ 20 ಲಕ್ಷ ರೂಪಾಯಿಗಳ ಭದ್ರತೆ ನೀಡಿ ಎನ್ನುವ ಅಧಿಕಾರಿಗಳ ನಡೆಯು ಹಲವು ಅನುಮಾನಕ್ಕೆ ಕಾರಣವಾಗಿದ್ದು. ಇದು ಸಂಪೂರ್ಣ ಸ್ವ ಹಿತಾಸಕ್ತಿ ಹೊಂದಿದ್ದು ಗುದ್ನೇಶ್ವರರ ಇತಿಹಾಸ ಅಳಿಸುವ ಪ್ರಯತ್ನವಾಗಿದೆ ಹಾಗೂ ಸಮನ್ಸ್ ನೀಡಿದವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು”

              ಮಾರುತಿ ಗಾವರಾಳ

           ಶ್ರೀಗದ್ನೇಶ್ವರ ಮಠದ ಭಕ್ತ  

“ಶ್ರೀ ಗುದ್ನೇಶ್ವರ ಮಠದ ಜಮೀನಿಗೆ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದರೂ ಸಹ ಆ ಜಮೀನಿನ ಕುರಿತಂತೆ ಪಟ್ಟಣ ಬಂದ್ ಮಾಡಿಸುವುದು ಜೊತೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದವರ ವಿರುದ್ಧ ವಿವಿಧ ರೀತಿಯ ಕೇಸ್ ಗಳನ್ನು ದಾಖಲಿಸುವುದು ಅಧಿಕಾರಿಗಳ ಕಾರ್ಯ ವೈಕರಿಯಾಗಿದ್ದು, ಇದನ್ನು ಖಂಡಿಸುತ್ತಾ ಸರ್ವಧರ್ಮದ ಭಕ್ತರಿಂದ ಜಾತ್ರೆಯಾಗು ಧಾರ್ಮಿಕ ಕಾರ್ಯಗಳಿಗೆ ಭೂಮಿ ಉಳಿಸುವ ಉದ್ದೇಶ ನಮ್ಮ ಪ್ರತಿಭಟನೆಯದ್ದಾಗಿದೆ”

            ಮಹೇಶ್ವರಿ ಸಾವಳಗಿ ಮಠ

               ವಕೀಲೆ ಕುಕನೂರು 

 “ಗ್ಯಾರಂಟಿ ಯೋಜನೆಯಿಂದ ಯಾವುದೇ ಹಣದ ಕೊರತೆ ಇಲ್ಲ ಎನ್ನುವ ಸರ್ಕಾರದಿಂದ 25 ರಿಂದ 30 ಎಕರೆ ಜಮೀನು ಖರೀದಿ ಮಾಡುವ ಸಾಧ್ಯತೆ ಇಲ್ಲವೇ….? ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶ್ರೀ ಗುದ್ನೆಶ್ವರ ಮಠದ ಜಮೀನಿನ ವಿಷಯ ಬಿಟ್ಟು ಬೇರೆಕಡೆ ಜಮೀನು ಖರೀದಿಸಿ ಸರ್ಕಾರ ಕಾರ್ಯಾಲಯದ ಕಟ್ಟಡ ನಿರ್ಮಿಸಲಿ”

             ಲಕ್ಷ್ಮಣ ಕಾಳಿ

       ಕುಕನೂರು ಪಟ್ಟಣದ ನಾಗರಿಕ

 ಈ ಸಂದರ್ಭದಲ್ಲಿ ಗುದ್ನೇಶ್ವರ ಸ್ವಾಮಿಯ ಭಕ್ತರಾದ ಸಿದ್ದಿಯ್ಯ ಉಳ್ಳಾಗಡ್ಡಿ, ಕರಿಬಸಯ್ಯ ಬಿನ್ನಾಳ, ಶಿವುಕುಮಾರ್ ನಾಗಲಾಪುರ್ ಮಠ್, ಜಗನಾಥ್ ಭೋವಿ, ವಿನಾಯಕ್ ಯಾಳಗಿ, ವಿನಾಯಕ್ ಸರಗಣಚಾರ್, ಮಹೇಶ್ ಕಲ್ಮಠ, ಶರಣಯ್ಯ ಹುಣಸಿಮರದ, ಮಲ್ಲು ಚೌದ್ರಿ, ನಾಗಪ್ಪ ಕಲ್ಮನಿ, ಮಧು ಕಲ್ಮನಿ, ಶರಣಪ್ಪ ಕಾಳಿ, ಶಿವರಾಜ್ ಎಲ್ಲಪ್ಪ ಗೌಡ್ರು, ವೀರೇಶ್ ಸಬರದ್ ಉಪಸ್ಥಿತರಿದ್ದರು.

Leave a Reply

error: Content is protected !!