ಮುದಗಲ್ಲ ವರದಿ..
ಮುದಗಲ್ಲ :- ವೆಂಕಟರಾಯನ ಪೇಟೆಯ ಮಾರುತೇಶ್ವರ ಜಾತ್ರೆ ಸಂಭ್ರಮ..
ಮುದಗಲ್ಲ :-ಸ್ಥಳೀಯ ವೆಂಕಟರಾಯನ ಪೇಟೆಯ ಮಾರುತೇಶ್ವರ ಜಾತ್ರಾ ಮಹೋತ್ಸವವು ಶ್ರಾವಣ ಮಾಸದ ಕೊನೆ ಸೋಮವಾರದಂದು ಸಂಭ್ರಮ ದಿಂದ ನಡೆಯಿತು.

ಬೆಳಗ್ಗೆ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳೆಯರಿಂದ ಕಳಶದ ಮೆರವಣಿಗೆ ನಡೆಯಿತು. ಸಂಜೆ ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಾನಾ ಸಾಂಸ್ಕೃತಿಕ ತಂಡಗಳು ಹಾಗೂ ಡಿಜೆ ಸಾಂಗ್ ಮುಖಾಂತರ ಮೆರವಣಿಗೆಗೆ ಮೆರಗು ತಂದವು.

ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ, ಶರಣಬಸವ ವ್ಯಾಕರನಾಳ, ತಮ್ಮಣ್ಣ ಗುತ್ತೆದಾರ,ಡಾ!!ಮಂಜುನಾಥ, ಶಿವಶಂಕರಗೌಡ,ದಾವೂದ್ ಸಾಬ,ಅಜ್ಮೀರ್ ಬೆಳ್ಳಿಕಟ್ ,ಮಂಜುನಾಥ ಬನ್ನಿಗೋಳ್, ನ್ಯಾಮತುಲ್ಲಾ ಖಾದ್ರಿ, ಪರಶುರಾಮ್ ಕಟ್ಟಿಮನಿ ಜೆ.ಇ , ಸಂಗಪ್ಪ ಹಿರೇಮನಿ , ಶರಣಪ್ಪ ಕಟ್ಟಿಮನಿ, ರವಿ ಕಟ್ಟಿಮನಿ, ವೆಂಕಟೇಶ ಹಿರೇಮನಿ, ದುರುಗಪ್ಪ ಕಟ್ಟಿಮನಿ, ಆನಂದ ಪೇಂಟರ್, ಬಸವರಾಜ ಬಂಕದಮನಿ, ರಾಘ ಕುದುರಿ,ಸುರೇಶ್ ಭಂಡಾರಿ, ಮೌನೇಶ ಭಂಡಾರಿ ,ಕೃಷ್ಣ ಚಲುವಾದಿ, ವಮಾ೯ ಪೇಂಟರ್ ,ಷ ಹುಲೇಶ ,ಅಮರೇಶ ಪೇಂಟರ್ , ರಾಮಪ್ಪ ಬಂಕದಮನೆ ಸೇರಿ ವೆಂಕಟರಾಯನ ಪೇಟೆಯ ಸಮಸ್ತ ಭಕ್ತರು ಶ್ರಾದ್ಧ ಭಕ್ತಿ ಯಿಂದ ಪಾಲ್ಗೊಂಡಿದ್ದರು.
ವರದಿ :-ಮಂಜುನಾಥ ಕುಂಬಾರ
