LOCAL NEWS : 32 ಲಕ್ಷ ರೂ.ಹಣವನ್ನು ಕೊಟ್ಟು ಮೋಸ ಹೋದ ಮಹಿಳೆಗೆ ನ್ಯಾಯ ಕೊಡಿಸಿದ ರಜನಿರಾಜ್ …!!
ಚಿಕ್ಕಮಗಳೂರು :- ಜಿಲ್ಲೆ, ಕಡೂರಿನ ಅನಕ್ಷರಸ್ಥ ಮಹಿಳೆ, ನಿವೇಶನದ ಆಸೆಯಿಂದ ಒಬ್ಬ ಮಹಿಳೆಯನ್ನು ನಂಬಿ ರೂ.32 ಲಕ್ಷ ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ ಒಂದು ತಿಂಗಳ ಹಿಂದೆ ಅನ್ಯಾಯಕ್ಕೆ ಒಳಗಾದ ಮಹಿಳೆ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜನಿರಾಜ್ ಮಂಡ್ಯ ಇವರಲ್ಲಿಗೆ ಬಂದು ದೂರನ್ನು ದಾಖಲಿಸಿದ್ದರು.
ನನಗೆ ನ್ಯಾಯವನ್ನು ಕೊಡಿಸಿ , ನೊಂದ ಮಹಿಳೆ ನಿವೇಶನದ ಆಸೆಯಿಂದ 32 ಲಕ್ಷ ಹಣವನ್ನು ಕೊಟ್ಟು ಕಳೆದು ಕೊಂಡಿದ್ದೇನೆ ಎಂದು ಹೇಳಿ ದೂರನ್ನು ದಾಖಲಿಸಿ ಹೋಗಿದ್ದರು .ಆ ಸಂಬಂಧ ಚಿಕ್ಕಮಂಗಳೂರು ಜಿಲ್ಲೆಗೆ ಎರಡು ಬಾರಿ ಬೇಟಿ ಕೊಟ್ಟು, ಕುಟುಂಬದವರನ್ನು ಕರೆಸಿ ಆಪ್ತ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಸಲಾಯಿತು..
32-ಲಕ್ಷ ಹಣವನ್ನು ಕೊಡುವುದಾಗಿ ಒಪ್ಪಿಕೊಂಡಿದ್ದು ಕಾನೂನಿನ ದಾಖಲಾತಿಗಳನ್ನು ಭದ್ರತೆಯ, ದೃಷ್ಟಿಯಿಂದ ನೀಡಿರುತಾರೆ ಪರ್ಸನಲ್ ಚೆಕ್ಕು, ಪ್ರೊನೌಟ್, ಇ-ಸ್ಟ್ಯಾಂಪ್ ಪೇಪರನ್ನು ಸ್ವ ಇಚ್ಛೆಯಿಂದ ನೀಡಿರುತ್ತಾರೆನೊಂದ ಮಹಿಳೆಗೆ, ನ್ಯಾಯ ಕೊಡಿಸುವಲ್ಲಿ, ಮಹಿಳಾ ಅಧ್ಯಕ್ಷ ರಜಿನಿರಾಜ್ ರವರು ಅವರ ಜೊತೆಗೆ ರಶ್ಮಿ ಕೂಡ ಹಾಜರಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಶಸ್ವಿ ಯಾಗಿದ್ದಾರೆ.