ಮುದಗಲ್ಲ ವರದಿ..
ಮುದಗಲ್ಲನಲ್ಲಿ ವಿವಿಧೆಡೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಣೆ..
ಮುದಗಲ್ : ಪಟ್ಟಣದ ಪುರಸಭೆ ಕಾರ್ಯಾಲಯ, ನಾಡ ಕಚೇರಿ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಎಂ.ಗಂಗಣ್ಣ ಕಾಲೇಜು, ಸೇರಿದಂತೆ ವಿವಿಧಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ ಸಡಗರ ಸಂಭ್ರಮ ದಿಂದ ಮಾಡಿದರು.

ಸರ್ದಾರ ವಲ್ಲಭಭಾಯಿ ಪಾಟೀಲ್ ಮಹಾತ್ಮ ಗಾಂಧೀಜಿ, ಡಾ:ಬಿ, ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಬೋಗರಾ ,ನಾಡ ಕಚೇರಿಯಲ್ಲಿ ಉಪತಹಶೀಲ್ದಾರ ತುಳಜಾರಮ ಸಿಂಗ್,ಪೋಲಿಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ, ಎಂ, ಕೃಷಿ ಅಧಿಕಾರಿ ಶ್ರೀಶೈಲ್
ರವರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ,ಶಿವಗ್ಯಾನಪ್ಪ
ಅಮೀರ್ ಬೇಗ್ ಉಸ್ತಾದ್,ಬಾಬು ಉಪ್ಪಾರ,ಉಮರ್ ಅಲ್ಲಿ ಮಕಾದಾರ್ , ಹಸನ್ ಕವ್ವಾ,ಬಸವರಾಜ ಬಂಕದಮನೆ, ಹಾಗೂ ಪುರಸಭೆ ಸಿಬ್ಬಂದಿ ಗಳು,ಗ್ರಾಮಲೆಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ರೈತ ಸಂಪರ್ಕ ಕೇಂದ್ರದ, ಸಿಬ್ಬಂದಿಗಳು, ಸಮುದಾಯದ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ರಥಮ ದರ್ಜೆ ಕಾಲೇಜ್ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ