You are currently viewing BREAKING : “ಮಹಾ ಮೈತ್ರಿಕೂಟ ಸಭೆ”ಗೆ ಕ್ಷಣಗಣನೆ : ಕಾಂಗ್ರೆಸ್‌ ವರಿಷ್ಠರನ್ನು ಸ್ವಾಗತಿಸಿದ ಸಿಎಂ , ಡಿಸಿಎಂ..!!

BREAKING : “ಮಹಾ ಮೈತ್ರಿಕೂಟ ಸಭೆ”ಗೆ ಕ್ಷಣಗಣನೆ : ಕಾಂಗ್ರೆಸ್‌ ವರಿಷ್ಠರನ್ನು ಸ್ವಾಗತಿಸಿದ ಸಿಎಂ , ಡಿಸಿಎಂ..!!

ಬೆಂಗಳೂರು : ಇಂದು ವಿಪಕ್ಷಗಳ “ಮಹಾ ಮೈತ್ರಿಕೂಟ ಸಭೆ” ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದರು.

ರಾಜಧಾನಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆಗಮಿಸಿದರು.

ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.

Leave a Reply

error: Content is protected !!