You are currently viewing LOCAL NEWS : ವಿಶ್ವಕರ್ಮ ದಿನಾಚರಣೆ : ಸಂಭ್ರಮದಿಂದ ನಡೆದ  ಮೆರವಣಿಗೆ!

LOCAL NEWS : ವಿಶ್ವಕರ್ಮ ದಿನಾಚರಣೆ : ಸಂಭ್ರಮದಿಂದ ನಡೆದ ಮೆರವಣಿಗೆ!

ವಿಶ್ವಕರ್ಮ ದಿನಾಚರಣೆ; ಸಂಭ್ರಮದಿಂದ ನಡೆದ ಮೆರವಣಿಗೆ

ಕೊಪ್ಪಳ : ಜಿಲ್ಲಾಡಳಿತದಿಂದ ಶ್ರೀ ವಿಶ್ವಕರ್ಮ ಜಯಂತಿ
ಅಂಗವಾಗಿ ಸೆ.18 ರಂದು ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿದರು.

ಮೆರವಣಿಗೆಯು ಶ್ರೀ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು ಗಡಿಯಾರ ಕಂಬ, ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಸಾಗಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಕೊಪ್ಪಳ ಸಹಾಯಕ ಆಯುಕ್ತರಾದ ಕ್ಯಾಪ್ಟನ್
ಮಹೇಶ್ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ್  ವಿಠಲ್
ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ ಹಾಗೂ ಸಮಾಜದ ಮುಖಂಡರಾದ ನಾಗೇಶ ಕುಮಾರ್, ದೇವಪ್ಪ ಬಡಿಗೇರ್, ಎ ಪ್ರಕಾಶ, ರುದ್ರಪ್ಪ ಬಡಿಗೇರ್, ಮೌನೇಶ್ ಬಡಿಗೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!