ನ.26 ಸಂವಿಧಾನ ದಿನ, ಪೀಠಿಕೆ ವಾಚನದ ಮೂಲಕ ಸಂವಿಧಾನ ದಿನ ಆಚರಿಸಿ : ಎಡಿಸಿ ಇ.ಬಾಲಕೃಷಪ್ಪ
ವಿಜಯನಗರ (ಹೊಸಪೇಟೆ) : ನವಂಬರ್ 26 ರಂದು ಸಂವಿಧಾನ ದಿನ ನಿಮಿತ್ತ ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ಎಲ್ಲಾ ಇಲಾಖೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಪಿಎಸ್ಯುಗಳಲ್ಲಿ ಸಾಮೂಹಿಕವಾಗಿ ಭಾರತದ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡುವ ಮೂಲಕ ಮತ್ತು ಸಂವಿಧಾನದ ಮೌಲ್ಯಗಳು, ಸಂವಿಧಾನ ಮೂಲ ಆಶಯಗಳ ಬಗ್ಗೆ ಚರ್ಚೆ, ರಸಪ್ರಶ್ನೆ, ಕಾರ್ಯಕ್ರಮಗಳನ್ನು ಮತ್ತು ವೆಬಿನಾರ್ಗಳನ್ನು ಆಯೋಜಿಸಿ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಹಾಗೂ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದ್ದಾರೆ.