ಪ್ರೌಢಾವಸ್ಥೆ ಹೆಣ್ಣುಮಕ್ಕಳಿಗೆ ಬೆಂಬಲ ಭರವಸೆ & ಸತ್ಯಗಳ ಅಗತ್ಯವಿದೆ!
ಮುಳಗುಂದ : ಅಂಜುಮನ ಎ ಇಸ್ಲಾಂ ಸರಕಾರಿ ಉರ್ದು ಪ್ರೌಢಶಾಲೆ & ಪಿ ಯು ಕಾಲೇಜಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ನೆಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ನಡೆಯಿತು.
ಗದಗ ಡಿಜಿಎಂ ಕಾಲೇಜು ಉಪನ್ಯಾಸಕಿ ವೈದ್ಯ ಡಾ.ಮಮತಾ ಕಟಾವ್ಕರ್ ಅವರು ಮಾತನಾಡಿ ಹೆಣ್ಣು ಮಕ್ಕಳಿಗೆ & ಹದಿಹರೆಯದವರಿಗೆ ಸತ್ಯ ಭರವಸೆ ಮತ್ತು ಬೆಂಬಲವನ್ನು ನೀಡುವ ಮೂಲಕ ಪ್ರೌಢಾವಸ್ಥೆಯನ್ನು ನಿಭಾಯಿಸಬಹುದು ಎಂದು ತಿಳಿಸಿದರು.
ಮಕ್ಕಳಿಗೆ ಪ್ರೋಜೆಕ್ಟರ್ ಮೂಲಕ ಸೂಕ್ಷ್ಮತೆಯ ಮಾಹಿತಿ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ಪೌಢಶಾಲೆ ಮುಖ್ಯೋಪಾಧ್ಯಾಪಕಿ ಶ್ರೀಮತಿ ರಂಜನಾ ತಳಗೇರಿ ವಹಿಸಿದ್ದು ಅಂಜುಮನ ಅಧ್ಯಕ್ಷ ಶ್ರೀ ತಾಜುದ್ದೀನ ಕಿಂಡ್ರೀ ಎಸ್ ಡಿ ಎಂ ಸಿ ಅಧ್ಯಕ್ಷ ಎ ಡಿ ಮುಜಾವರ ಸದಸ್ಯರಾದ ಇಸ್ಮಾಯಿಲ್ ಖಾಜಿ ಮಹ್ಮದರಫೀಕ ದಲೀಲ ಹೈದರ ಖವಾಸ ದಾವೂದ ಜಮಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಶಾಲಾಕಾಲೇಜು ಬೋಧಕವರ್ಗ ಹಾಗೂ ಸಿಬ್ಬಂದಿ ಹಾಜರಿದ್ದರು.
ವರದಿ : ವೀರೇಶ್ ಗುಗರಿ