ಮುದಗಲ್ಲ ವರದಿ..
ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಸಿಬ್ಬಂದಿ ಅಸಡ್ಡೆ ವತ೯ನೆ..
ಮುದಗಲ್ಲ :- ಸರಕಾರಿ ಆಸ್ಪತ್ರೆಗೆ ಹೆಚ್ಚಾಗಿ ಗ್ರಾಮೀಣ ಭಾಗದಿಂದ ಬಡ ರೋಗಿಗಳೇ ಆಗಮಿಸುತ್ತಾರೆ, ಅವರಿಗೆ ಆಸ್ಪತ್ರೆಯ ವಿಚಾರದಲ್ಲಿ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ, ಆ ಕ್ಷಣದಲ್ಲಿ ಆಸ್ಪತ್ರೆ ಸಿಬಂದಿ ಸೂಕ್ತ ಮಾರ್ಗದರ್ಶನ ನೀಡದೆ ಅಸಡ್ಡೆ ವತ೯ನೆ
ತೋರುತ್ತಿದ್ದಾರೆ ಎಂದು ರೋಗಿಯಾದ ಅಮರೇಶ ಅವರು ಆರೋಪ ಮಾಡಿದರು.
ಸಮುದಾಯ ಆಸ್ಪತ್ರೆಗೆ ಕಾಲಿಗೆ ಗಾಯವಾಗಿ ಚಿಕಿತ್ಸೆಗೆ ಕರೆತಂದಾಗ ಔಷಧ ನೀಡವ ಸಿಬಂದಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಸಿಬ್ಬಂದಿ ಔಷಧಿ ನೀಡುವಾಗ ಏರು ಧ್ವನಿ ಯಲ್ಲಿ ಮಾತನಾಡುತ್ತಾರೆ ಸರಿಯಾಗಿ ಸಮಯಕ್ಕೆ ಔಷಧಿ ಸೇವಿಸುವ ಸಮಯ ಹೇಳಿ ಅಂದರೆ ಎಷ್ಟು ಬಾರಿ ಕೇಳುತ್ತೀಯಾ ಎಂದು ಏರು ಧ್ವನಿಯಲ್ಲಿ ಮಾತಾಡುವುದು ಅಸಡ್ಡೆ ವತ೯ನೆ ತೋರುತ್ತಿವುದು ಕಂಡುಬಂದಿದೆ.
ರೋಗಿಗಳಿಗೆ ಅಂತಹಾ ತುರ್ತು ಸಂದರ್ಭದಲ್ಲಿ ಸಿಬಂದಿ ನೆರವು ಅಗತ್ಯ. ಏರು ಧ್ವನಿಯಲ್ಲಿ ಮಾತಾಡುವುದು ಸರಿಯಲ್ಲ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಇಂತಹ ಸಿಬ್ಬಂದಿಗಳ ಮೇಲೆ ಕ್ರಮ ಹಾಗೂ ತಿಳುವಳಿಕೆ ಹೇಳಿ ಎಂದರು..
ವರದಿ:- ಮಂಜುನಾಥ ಕುಂಬಾರ