LOCAL NEWS : ಸಹಸ್ರಾರು ಭಕ್ತರ ನಡುವೆ ಪೂರ್ಣಗೊಂಡ ಬೆದವಟ್ಟಿ ಶ್ರೀಗಳ ಅಂತ್ಯಕ್ರಿಯೆ..!

You are currently viewing LOCAL NEWS : ಸಹಸ್ರಾರು ಭಕ್ತರ ನಡುವೆ ಪೂರ್ಣಗೊಂಡ ಬೆದವಟ್ಟಿ ಶ್ರೀಗಳ ಅಂತ್ಯಕ್ರಿಯೆ..!

ಪ್ರಜಾವೀಕ್ಷಣೆ ಸುದ್ದಿ :-

LOCAL NEWS : ಸಹಸ್ರಾರು ಭಕ್ತರ ನಡುವೆ ಪೂರ್ಣಗೊಂಡ ಬೆದವಟ್ಟಿ ಶ್ರೀಗಳ ಅಂತ್ಯಕ್ರಿಯೆ..!

ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆದವಟ್ಟಿ ಗ್ರಾಮದ ಸಂಸ್ಥಾನ ಹಿರೇಮಠದ ಪೂಜ್ಯರಾದ ಶ್ರೀ ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಮರಣೋತ್ತರ ವಿಧಿ ವಿಧಾನಗಳು ಹಲವಾರು ಮಠಾಧೀಶರು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಬುಧವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಶ್ರೀಗಳು ಇಹಲೋಕ ತ್ಯಜಿಸಿದ್ದು ಗುರುವಾರ ಸಾಯಂಕಾಲ 5:00 ಗಂಟೆಯ ವೇಳೆಗೆ ಶ್ರೀಗಳ ಮರಣೋತ್ತರ ವಿಧಿ ವಿಧಾನಗಳನ್ನು ಕಾಶಿ ಜಗದ್ಗುರು ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಶ್ರೀಗಳ ದೆಹಾಂತ್ಯ ಸುದ್ದಿ ತಿಳಿಯುತ್ತಿದ್ದಂತೆಯೇ ಭಕ್ತ ವರ್ಗ ಮಠದ ಕಡೆಗೆ ಆಗಮಿಸ ತೊಡಗಿದರು. ಹಲವು ಗ್ರಾಮಗಳಿಂದ ತಂಡೋಪತಂಡವಾಗಿ ಶ್ರೀಮಠದ ಕಡೆಗೆ ಆಗಮಿಸಿ ಅಂತಿಮ ದರ್ಶನ ಪಡೆದು ಶ್ರೀಗಳ ಅಂತಿಮ ಯಾತ್ರೆಯಲ್ಲಿ ಭಾಗಿಯಾದರು.

ಬುಧವಾರ ಸಾಯಂಕಾಲದಿಂದ ಗುರುವಾರ ಮಧ್ಯಾಹ್ನದವರೆಗೆ ಸಾರ್ವಜನಿಕರಿಗಾಗಿ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ನಂತರ ಶ್ರೀಗಳ ಮರಣೋತ್ತರ ವಿಧಿ ವಿಧಾನಗಳು ಪ್ರಾರಂಭಗೊಂಡು ಕಾಶಿ ಜಗದ್ಗುರು ಮಹಾಸ್ವಾಮಿಗಳ ನೇತೃತ್ವದಲ್ಲಿ ಜೊತೆಗೆ ಹಲವಾರು ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಶ್ರೀಗಳ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ತಿವ ಶರೀರದ ಮೆರವಣಿಗೆ ಮಾಡಲಾಯಿತು ದಾರಿಗಿದ್ದಕ್ಕೂ ಜನಸ್ತೋಮಗೊಂಡಿದ್ದ ಭಕ್ತರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿ ಚಳಗೇರಿ, ಶ್ರೀಸಿದ್ದಲಿಂಗ ಶಿವಾಚಾರ್ಯ ಮಂಗಳೂರು, ಡಾ. ಮಹಾದೇವ ಸ್ವಾಮಿಗಳು ಕುಕನೂರು, ಶ್ರೀ ಸಿದ್ರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಯಲಬುರ್ಗಾ, ಬಸವಲಿಂಗ ಶಿವಚಾರ್ಯ ಸ್ವಾಮಿಗಳು ಯಲಬುರ್ಗಾ, ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೆಬ್ಬಾಳ, ಅಭಿನವ ಪಂಚಾಕ್ಷರ ಸ್ವಾಮಿಗಳು ರಾಜೂರು, ಚಿಕ್ಕೇನಕೊಪ್ಪದ ಶ್ರೀಚನ್ನವೀರ ಶರಣರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

1. ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಮೃತ್ಯು ಪತ್ರವನ್ನು ನೋಂದಣಿ ಮಾಡಿದ್ದು ಮೃತ್ಯು ಪತ್ರದ ಪ್ರಕಾರ ಯಲಬುರ್ಗಾ ಪಟ್ಟಣದ ಹಿರೇಮಠದ ಶ್ರೀಗಳಾದ ಶ್ರೀ ಸಿದ್ದರಾಮಯ್ಯ ಮಹಾಸ್ವಾಮಿಗಳು ಹಾಗೂ ಚಳಗೇರಿ ಗ್ರಾಮದ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯರು ಅವರ ಮೃತ್ಯು ನಂತರ ಮಠದ ಜವಾಬ್ದಾರಿಯನ್ನು ಹೊಂದಿದ್ದು ಕಾರಣಾಂತರದಿಂದ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ ಆದ್ದರಿಂದ ಭಕ್ತರ ಜೊತೆ ಸೇರಿಕೊಂಡು ಸಿದ್ದರಾಮೇಶ್ವರ ಶಿವಾಚಾರ್ಯರು ಹಾಗೂ ವೀರ ಸಂಗಮೇಶ್ವರ ಶಿವಾಚಾರ್ಯರು ಸೇರಿಕೊಂಡು ಮಠಕ್ಕೆ ಪೀಠಾಧೀಶರನ್ನು ನೇಮಕ ಮಾಡಬೇಕು. ನೂತನ ಮಠಾಧೀಶರ ಪಟ್ಟಾಧಿಕಾರ ವಾಗುವ ತನಕ ಮಠದ ಸಕಲ ಆಸ್ತಿಗಳಿಗೆ ಉಭಯ ಶ್ರೀಗಳು ಹಕ್ಕುದಾರರಾಗಿರುತ್ತಾರೆ ಎಂದು ಮೃತ್ಯು ಪತ್ರವನ್ನು ಬರೆಸಿಟ್ಟಿರುತ್ತಾರೆ.

2. ಶ್ರೀಗಳ ಅಂತಿಮ ದರ್ಶನಕ್ಕೆ ಹಲವು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದು ಭಕ್ತರಿಗೆ ಅನುಕೂಲವಾಗಲೆಂದು ಗ್ರಾಮದ ವಿವಿಧ ಕಡೆಗಳಲ್ಲಿ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಭಕ್ತರು ಸ್ವಯಂ ಪ್ರೇರಿತವಾಗಿ ಆಯೋಜನೆ ಮಾಡಿದರು.

3. ಶ್ರೀಗಳ ಪುಣ್ಯರಾಧನೆ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ಮಹಾಸ್ವಾಮಿಗಳ ಸನ್ನಿಧಾನದಲ್ಲಿ ದಿನಾಂಕ 1.6.2025 ಭಾನುವಾರ ಬೆಳಿಗ್ಗೆ 7:00ಗೆ ಶ್ರೀಮಠದ ಆವರಣದಲ್ಲಿ ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿರುತ್ತದೆ.

Leave a Reply

error: Content is protected !!