Post Views: 418
ಮುದಗಲ್ಲ ವರದಿ..
ಮುದಗಲ್:- ಪಟ್ಟಣದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ ಆಗಷ್ಟ್ 6 ರಂದು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಹಟ್ಟಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮುದಗಲ್ ಘಟಕದ ನೇತೃತ್ವದಲ್ಲಿ ಮಾಜಿ ಶಾಸಕರಾದ ಶ್ರೀ ಎಂ. ಗಂಗಣ್ಣ ಅಭಿಮಾನಿ ಬಳಗ ಹಾಗು ದಲಿತ ಪರ, ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಸಹಯೋಗ ದೊಂದಿಗೆ ಐತಿಹಾಸಿಕ ಮುದಗಲ್ ಪಟ್ಟಣ ವನ್ನು ತಾಲೂಕು ಘೋಷಣೆ ಮಾಡಬೇಕು ಹಾಗು ಪಟ್ಟಣದಲ್ಲಿ ಕುಡಿಯುವ ನೀರು 15 ದಿವಸಕ್ಕೊಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿದ್ದು ನೆನೆಗುದಿಗೆ ಬಿದ್ದಿರುವ 24/7 ಕಾಮಗಾರಿಯ ಟೆಂಡರನ್ನು ಆದಷ್ಟು ಬೇಗ ಕರೆದು ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಿ ಜನರಿಗೆ ಅನುಕೂಲ ಮಾಡ ಬೇಕೆಂದು ಆಗ್ರಹಿಸಿ ಆಗಷ್ಟ್ 5 ರಂದು ಮಧ್ಯಾಹ್ನ 2 ಗಂಟೆಗೆ ಮುದಗಲ್ ಪಟ್ಟಣದಿಂದ ಪಾದಯಾತ್ರೆ ಪ್ರಾರಂಭಿಸಿ ಲಿಂಗಸೂಗೂರು ಪಟ್ಟಣ ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮರುದಿನ ಆಗಷ್ಟ್ 6 ರಂದು ಬೆಳಿಗ್ಗೆ 6 ಗಂಟೆಗೆ ಲಿಂಗಸೂಗೂರನಿಂದ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತಲುಪಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಆದಕಾರಣ ಐತಿಹಾಸಿಕ ಮುದಗಲ್ ತಾಲೂಕು ಆಗಬೇಕೆಂದು ಆಶಿಸುವ ಹಾಗು ಕುಡಿಯುವ ನೀರಿನ ಬಗ್ಗೆ ಕಾಳಜಿ ಇರುವ ಪಟ್ಟಣದ ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲು ಹೇಳಿದರು.
ಈ ಸಂದರ್ಭದಲ್ಲಿ ಸಾಬು ಹುಸೇನ್, ಸಂತೋಷ ಕುಮಾರ, ಎಸ್.ಎನ್. ಖಾದ್ರಿ, ಶಾಲಂ ಸಾಬ,ಹುಸೇನ್ ಸಾಬ್ ಡೆರಿ,ಶಬ್ಬೀರ ಬೇಗ್,ಅಬ್ದುಲ್ ಮಜೀದ, ಮಹಾಂತೇಶ ಚೆಟ್ಟರ್,ಭೀಮಣ್ಣ ಉಪ್ಪಾರ, ಜಮೀರ ಪಾಶ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ