CRIME NEWS : “ಹಳೆ ವೈಷಮ್ಯ ಹಿನ್ನೆಲೆ : ಹೊಲದಿಂದ ಮನೆಗೆ ಬರುವಾಗ ಮಾರಕಾಸ್ತ್ರದಿಂದ ಕೊಚ್ಚಿ, ವ್ಯಕ್ತಿಯ ಬರ್ಬರ ಕೊಲೆ”

You are currently viewing CRIME NEWS : “ಹಳೆ ವೈಷಮ್ಯ ಹಿನ್ನೆಲೆ : ಹೊಲದಿಂದ ಮನೆಗೆ ಬರುವಾಗ ಮಾರಕಾಸ್ತ್ರದಿಂದ ಕೊಚ್ಚಿ, ವ್ಯಕ್ತಿಯ ಬರ್ಬರ ಕೊಲೆ”

“ಕಲಬುರಗಿ | ಹಳೆ ವೈಷಮ್ಯ ಹಿನ್ನೆಲೆ : ಹೊಲದಿಂದ ಮನೆಗೆ ಬರುವಾಗ ಮಾರಕಾಸ್ತ್ರದಿಂದ ಕೊಚ್ಚಿ, ವ್ಯಕ್ತಿಯ ಬರ್ಬರ ಕೊಲೆ”

ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕಲಬುರಗಿ ಕಲಬುರಗಿ ತಾಲ್ಲೂಕಿನ ಸೀತನೂರು ಗ್ರಾಮದ ಬ್ರಿಡ್ಜ್ ಬಳಿ ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆಗೈದ ದಾರುಣ ಘಟನೆ ಭಾನುವಾರ ನಡೆದಿದೆ.

ಸೀತನೂರ ಗ್ರಾಮದ ನಿವಾಸಿ ಶಿವರಾಯ ಎಚ್ ಮಾಲಿಪಾಟೀಲ್ ವಯಸ್ಸು(65) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಕೆಲ ವರ್ಷಗಳ ಹಿಂದೆ ಅದೇ ಗ್ರಾಮದ ಲಕ್ಷ್ಮೀಕಾಂತ್  ತಂದೆ ನಾಗೇಂದ್ರ ಮಾಂಗ್  ಎಂಬುವವರನ್ನು 2008ರಲ್ಲಿ ಕೊಲೆ ಮಾಡಲಾಗಿತ್ತು.

ಆ ಹಿಂದಿನ ಕೊಲೆಯ ಅಥವಾ ಹಳೆ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಗೆ, ಪ್ರಸ್ತುತ ಕೊಲೆಯಾದ ಶಿವರಾಯ ಮಾಲಿಪಾಟೀಲ್‌ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ.

ಹೀಗಾಗಿ ಹಳೆಯ ವೈಷಮ್ಯ ಕಾರಣದಿಂದ 17 ವರ್ಷಗಳ ಬಳಿಕ ತಂದೆಯ ಕೊಲೆಯ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ನಡೆದಿದೆʼ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

 ಶಿವರಾಯ ಮಾಲಿ ಪಾಟೀಲ್ ಈತನು ಸಹ ಸೀತನೂರ ಗ್ರಾಮದ ನಿವಾಸಿಯಾಗಿದ್ದ,ಅವರು ಹೊಲದಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಸಂಚು ರೂಪಿಸಿದ ಲಕ್ಷ್ಮೀಕಾಂತ್ ನಾಗೇಂದ್ರಪ್ಪ ಮಾಂಗ್ ಎಂಬಾತನು ಶಿವರಾಯನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಮಾಹಿತಿ ದೊರಕಿದೆ.

ಕೊಲೆಯಾದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್‌.ಡಿ ನೇತ್ರತ್ವದ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ  ಕುರಿತು ಕಲಬುರಗಿ ತಾಲ್ಲೂಕಿನ  ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Leave a Reply

error: Content is protected !!