BIG NEWS : ಪತ್ರಕರ್ತರಿಗೂ ಒಂದು ರಕ್ಷಣಾ ವೇದಿಕೆ ಅವಶ್ಯಕ : ಬಂಗ್ಲೆ ಮಲ್ಲಿಕಾರ್ಜುನ್

You are currently viewing BIG NEWS : ಪತ್ರಕರ್ತರಿಗೂ ಒಂದು ರಕ್ಷಣಾ ವೇದಿಕೆ ಅವಶ್ಯಕ : ಬಂಗ್ಲೆ ಮಲ್ಲಿಕಾರ್ಜುನ್

ಪ್ರಜಾ ವೀಕ್ಷಣೆ ಸುದ್ದಿ :

BIG NEWS : ಪತ್ರಕರ್ತರಿಗೂ ಒಂದು ರಕ್ಷಣಾ ವೇದಿಕೆ ಅವಶ್ಯಕ : ಬಂಗ್ಲೆ ಮಲ್ಲಿಕಾರ್ಜುನ್

ಸಿಂಧನೂರು : ರಾಜ್ಯದಲ್ಲಿ ಎಲ್ಲಾ ರಂಗದವರಿಗೆ ರಕ್ಷಣಾ ವೇದಿಕೆ ಇದೆ. ಪತ್ರಕರ್ತರ ಹಿತದೃಷ್ಠಿ ಹಿನ್ನಲೆಯಲ್ಲಿ ಪತ್ರಕರ್ತರ ರಕ್ಷಣಾ ವೇದಿಕೆ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಇಂದು ನಗರದ ಮಿಲಾಪ್ ಶಾಧಿ ಮಹಲ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ತಾಲೂಕು ಸಮಿತಿ ಸಿಂಧನೂರು ವತಿಯಿಂದ ಹಮ್ಮಿಕೊಂಡ ‘ರಾಜ್ಯ ಮಟ್ಟದ ಪತ್ರಿಕಾ ಕಾರ್ಯಗಾರ ಹಾಗೂ ಪದಗ್ರಹಣ’ ಕಾರ್ಯಕ್ರಮ ನಡೆಯಿತು.

ಈ ವೇಳೆಯಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಬಂಗ್ಲೆ ಮಲ್ಲಿಕಾರ್ಜುನ, ಈ ರಾಜ್ಯದಲ್ಲಿ ಪತ್ರಿಕಾ ರಂಗಕ್ಕೆ ಯಾವುದೇ ರಕ್ಷಣಾ ವೇದಿಕೆ ಇಲ್ಲದಿರುವುದು ಸೋಚನಿಯವಾಗಿದೆ. ಹಾಗಾಗಿ ಪತ್ರಕರ್ತರಿಗೆ ಈ ಸಮಾಜದಲ್ಲಿ ರಕ್ಷಣೆ ಬೇಕಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರವೂ ನಮ್ಮ ಪತ್ರಕರ್ತರ ಆಶೋತ್ತರಗಳನ್ನು ಈಡೇರಿಸಿದ್ದಿದಲ್ಲಿ ಬಹುದೊಡ್ಡ ಕಾನೂನು ಹೋರಾಟಕ್ಕೆ ನಮ್ಮ ಕಾನಿಪ ಧ್ವನಿ ನಾಂದಿ ಹಾಡಲಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಎಂ ಶಿವಮೂರ್ತಿ, ‘ಪತ್ರಕರ್ತನಿಗೆ ಮೊದಲು ಸಮಯ ಪ್ರಜ್ಞೆ, ಶೀಸ್ತು, ಸಂಯಮ, ತಾಳ್ಮೆಯಿಂದ ಆಲಿಸುವ ವ್ಯಕ್ತಿತ್ವ ಇರಬೇಕು, ಪತ್ರಕರ್ತನಿಗೆ ಕೆಲವೇ ರಾಜಕೀಯ ಸುದ್ದಿ ಮಾಡಬಾರದು, ನಮ್ಮ ಸೂತ್ತಲಿನ ಸಮಾಜದಲ್ಲಿ ನಡೆಯುತ್ತಿರುವುದು ಅನ್ಯಾಯಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ಚಾಟಿ ಏಟು ನೀಡಬೇಕು ಎಂದರು.

ದಿವ್ಯಸಾನಿಧ್ಯ ಗಪ್ಪುರ್ ಅಬ್ಬಾಸ್ ಅಲಿ ತಾತನವರು, ಗೊನವರ, ಸಿಂಧನೂರು, ಇವರು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ಇಸಾಕ್ತಕಲಕೋಟೆ, ಡಿವೈಎಸ್ ಪಿ BS ತಳವಾರ್, ಸಿಪಿಐ ರಾಜಕುಮಾರ ಒಜೇಂತ್ರಿ, ಹಿರಿಯ ಉಪನ್ಯಾಸಕ ಎಂ ಶಿವಮೂರ್ತಿ, ಸಿಂಧನೂರು ನಗರಸಭೆಯ ಪೌರಾಯುಕ್ತ ಪಾಂಡುರಂಗ್ ಇಟಗಿ, ಸಿಂಧನೂರು ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ, ಡಿ ವೈ ಎಸ್ ಪಿ ಬಿ ಎಸ್ ತಳವಾರ, ಕೊಪ್ಪಳ ಜಿಲ್ಲಾಧ್ಯಕ್ಷ ಸುನಿಲ ಕುಮಾರ ಮಠದ, ಮಾನ್ವಿ ತಾಲೂಕ ಅಧ್ಯಕ್ಷ ಪರಶುರಾಮ ಚೌಡ್ಕಿ, ಕುಕನೂರು ತಾಲೂಕ ಅಧ್ಯಕ್ಷ ಚಂದ್ರು ಭಾನಾಪುರ, ಸಿಂಧನೂರು ಪ್ರಧಾನ ಕಾರ್ಯದರ್ಶಿ ಬಂದೇನವಾಜ್, ಕುಕನೂರು ತಾಲೂಕು ಪ್ರಧಾನ ಕಾರ್ಯದರ್ಶಿ ವೀರಯ್ಯ ಹಿರೇಮಠ್, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವಿವಿಧ ಜಿಲ್ಲೆ ಹಾಗೂ ತಾಲೂಕಿನ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!