ಪ್ರಜಾವೀಕ್ಷಣೆ ಸುದ್ದಿ :
LOCAL NEWS : ಕಲ್ಲೂರು ಗ್ರಾಮದಲ್ಲಿ ನೂತನ “ನಮ್ಮ ಕ್ಲಿನಿಕ್” ವಿಸ್ತಾರಣಾ ಕೇಂದ್ರ ಆರಂಭ..!

ಯಲಬುರ್ಗಾ : ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಇಂದು ನೂತನ ನಮ್ಮ ಕ್ಲಿನಿಕ್ ವಿಸ್ತಾರಣಾ ಕೇಂದ್ರವನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ಉದ್ಘಾಟಿಸಿದರು.

‘ಅವಳಿ ತಾಲೂಕಿನ ಗ್ರಾಮೀಣ ಜನತೆಗೆ ಆರೋಗ್ಯ ನೀಡುವ ಉದ್ದೇಶದಿಂದ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ, ಕ್ಷೇ ಅಭಿವೃದ್ಧಿ ವಿಶೇಷ ಒತ್ತು ನೀಡಿದ್ದು ಜನರು ಸಹಕಾರ ನೀಡಬೇಕು’ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ಈ ವೇಳೆಯಲ್ಲಿ ತಾ.ಪಂ ಇಒ, ಗ್ರಾ.ಪಂ ಅಧ್ಯಕ್ಷರು, ಸದಸ್ಯರಯ, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು, ಫೀಕಾರ್ಡ್ ಬ್ಯಾಂಕ್ ಅಧ್ಯಕ್ಷರು, ಸಿಪಿಐಯವರು, ವೈದ್ಯರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ವಿಶ್ವನಾಥ್ ಪಿ.