ಮುದಗಲ್ಲ ವರದಿ…
ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲು ಮುದಗಲ್ಲ ಪೊಲೀಸರು ಏಕತಾ ಓಟವನ್ನು ನಡೆಸಿದರು..

ಮುದಗಲ್ಲ :- ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳು ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ “ಏಕತಾ ಓಟ”ವನ್ನು ಆಯೋಜಿಸಿದ್ದವು. ಈ ಘಟನೆಯು ಸಮುದಾಯದೊಳಗೆ ಒಗ್ಗಟ್ಟು, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪೋಲಿಸರು ಹಾಗೂ ಎಸ್.ವಿ.ಎಂ ಶಾಲೆಯ ವಿಧ್ಯಾರ್ಥಿಗಳಿಗೆ ಸ್ಥಳೀಯ ಪತ್ರಕರ್ತರು ಓಟದಲ್ಲಿ ಭಾಗವಹಿಸಿ, ಒಗ್ಗಟ್ಟಿನ ಮನೋಭಾವವನ್ನು ಬಲಪಡಿಸಿದರು ಮತ್ತು ಏಕತೆ ಮತ್ತು ಶಕ್ತಿಯ ಮೌಲ್ಯಗಳನ್ನು ಸ್ಮರಿಸಿದರು.
ಈ ಕಾರ್ಯಕ್ರಮವು ನಾಗರಿಕರ ನಡುವೆ ಸಾಮರಸ್ಯ ಮತ್ತು ಸಹಯೋಗವನ್ನು ಬೆಳೆಸಲು ಮುದಗಲ್ಲ ಪೊಲೀಸರ ಬದ್ಧತೆಯನ್ನು ಒತ್ತಿಹೇಳಿತು, ಇದು ರಾಷ್ಟ್ರೀಯ ಏಕತಾ ದಿನದ ಸ್ಮರಣೀಯ ಗೌರವವಾಗಿದೆ.
ಅಕ್ಟೋಬರ್ 31 ಶ್ರೀ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಅಂಗವಾಗಿ ಇಂದು ಮುದಗಲ್ಲ ಪೊಲೀಸ್ ಕಚೇರಿಯ ಆವರಣದಲ್ಲಿ “ರಾಷ್ಟ್ರೀಯ ಏಕತಾ ದಿನ”ವನ್ನು ಆಚರಿಸಲಾಯಿತು. ಏಕತಾ ಓಟದಲ್ಲಿ ಮುದಗಲ್ಲ ಪೋಲಿಸ್ ಠಾಣೆಯ ಪಿ.ಎಸ್.ಐ ವೆಂಕಟೇಶ ಮಾಡಗೇರಿ, ASI ವೆಂಕಟಪ್ಪನಾಯಕ ದಳವಾಯಿ ,ಪತ್ರಕರ್ತ ರಾದ ರಾಘವೇಂದ್ರ ಗುಮಾಸ್ತೆ , ಸುರೇಶ್ ಪತ್ತಾರ ಸಂಗಮೇಶ ಸರಗಣಾಚಾರಿ ಐಪಿಎಸ್ ರವರು ಪ್ರತಿಜ್ಞಾ ವಿಧಿ ಬೋಧಿಸಿ ಏಕತಾ ಓಟಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದರು ದೇಶದಾದ್ಯಂತ ಈ ಕಾರ್ಯಕ್ರಮ ವನ್ನು ಭಾರತದ ಉಕ್ಕಿನ ಮನುಷ್ಯ, ದೇಶದ ಮೊದಲ ಗೃಹ ಸಚಿವ, ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ನಡೆಸಲಾಗುತ್ತಿದೆ ಎಂದು ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಪಾರ ಕೊಡುಗೆಯನ್ನು ಸ್ಮರಿಸಲು, ದೇಶದ ಆಂತರಿಕ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದೇವೆ ಎಂದು ಅವರು ಹೇಳಿದರು..

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿ ಗಳಾದ ಅಮರೇಶ್, ಅನಿಲ್ ಕುಮಾರ , ಹನುಮಂತ , ರಾಮಪ್ಪ, ರುದ್ರಗೌಡ.ಹಾಗೂ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ