You are currently viewing LOCAL NEWS : ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹ ಪಾಲ್ಗೊಳ್ಳುವಿಕೆ ಅಗತ್ಯ : ರಾಜೇಶ್ ಸಂಗಣ್ಣ

LOCAL NEWS : ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹ ಪಾಲ್ಗೊಳ್ಳುವಿಕೆ ಅಗತ್ಯ : ರಾಜೇಶ್ ಸಂಗಣ್ಣ

LOCAL NEWS : ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹ ಪಾಲ್ಗೊಳ್ಳುವಿಕೆ ಅಗತ್ಯ : ರಾಜೇಶ್ ಸಂಗಣ್ಣ

ಕೊಪ್ಪಳ : ರಾಷ್ಟ್ರದಲ್ಲಿ ವಿಚಕ್ಷಣೆಯನ್ನು ಬಲಪಡಿಸಲು ಹಾಗೂ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಹೇಳಿದರು.

ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮುನಿರಾಬಾದ್ ಉಪ ಕೇಂದ್ರ ದ ವತಿಯಿಂದ ವಿಜಕ್ಷಣ ಜಾಗೃತಿ ಸಪ್ತಹ 2025 ಅನ್ನು ಆಚರಿಸಲಾಯಿತು. ಈ ವೇಳೆ ಪವರ್ ಗ್ರೀಡ್ ಮುಖ್ಯ ವ್ಯವಸ್ಥಾಪಕ ರಾಜೇಶ್ ಸಂಗಣ್ಣ ಮಾತನಾಡುತ್ತಾ ಈ ಆಚರಣೆಯ ಉದ್ದೇಶ ವೃತ್ತಿಜೀವನ ಮತ್ತು ವಯಕ್ತಿಕ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿತನದ ಮಹತ್ವದ ಜಾಗೃತಿ ಮೂಡಿಸುವುದಾಗಿದ್ದು. ಎಲ್ಲರೂ ಉನ್ನತ ನೈತಿಕ ಮೌಲ್ಯಗಳನ್ನು ಪಾಲಿಸಿ ದೇಶದ ಪಾರದರ್ಶಕ ಮತ್ತು ಪ್ರಾಮಾಣಿಕತೆಯ ದೃಷ್ಟಿಕೋನಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

 

ಆಚರಣೆಯ ಭಾಗವಾಗಿ ತಾಲೂಕಿನ ಗಿಳಿಗೆರೆ ಗ್ರಾಮದ ಪ್ರಮುಖ ರಸ್ತೆ ಹಾಗೂ ರೈಲ್ವೆ ಸ್ಟೇಷನ್ ಗಳಲ್ಲಿ ಕಾಲ್ನಡಿಗೆ ಜಾತ ಆಯೋಜಿಸಿ ಸಿಬ್ಬಂದಿ ಮತ್ತು ನೌಕರರು ಪ್ರಾಮಾಣಿಕತೆ, ನಿಷ್ಠೆ ಮತ್ತು ಪಾದ ದರ್ಶಕತೆ ಕುರಿತು ಸಂದೇಶಗಳಿರುವ ಫಲಕಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಯೋಜಿಸಲಾಯಿತು. ಪವರ್ ಗ್ರಿಡ್ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯೊಂದಿಗೆ ನೈತಿಕ ನಡವಳಿಕೆಯತ್ತ ಸಾಮೂಹಿಕ ಹೊಣೆಗಾರಿಕೆಯ ಭಾವನೆ ಉಂಟಾಯಿತು.

ಕಾರ್ಯಕ್ರಮದಲ್ಲಿ ಸೀನಿಯರ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗುತ್ತಿ ಶ್ರೀನಿವಾಸ ರಾವ್, ಅಲೋಕ್ ಕುಮಾರ್ ಮಾಲಿ, ಪ್ರದೀಪ್ ಎಂ ಎಚ್, ಸಿ ಗಿರೀಶ್, ತನುಜ ಹಾಗೂ ಅಧಿಕಾರಿಗಳು, ನೌಕರರು, ವಾಹನ ಚಾಲಕರು ಮತ್ತು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

Leave a Reply

error: Content is protected !!