You are currently viewing ವಿವಿಧ ಪಕ್ಷ ತೊರೆದು ಆಮ್ ಆದ್ಮಿಗೆ ಸೇರ್ಪಡೆಯಾದ ನೂರಾರು  ಕಾರ್ಯಕರ್ತರು.

ವಿವಿಧ ಪಕ್ಷ ತೊರೆದು ಆಮ್ ಆದ್ಮಿಗೆ ಸೇರ್ಪಡೆಯಾದ ನೂರಾರು ಕಾರ್ಯಕರ್ತರು.

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಬೊಮ್ಮನಾಳ ಗ್ರಾಮದಲ್ಲಿ ಜೆಡಿಎಸ್,ಕಾಂಗ್ರೆಸ್ ,ಬಿಜೆಪಿ ಪಕ್ಷಗಳನ್ನು ತೊರೆದು 3 ಜನ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಶರಣಪ್ಪ ಸಜ್ಜಿಹೊಳ ನೇತೃತ್ವದಲ್ಲಿ ಪಕ್ಷವನ್ನು ಸೇರ್ಪಡೆಗೊಳಿಸಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಗಂಗಾವತಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಶರಣಪ್ಪ ಸಜ್ಜಿಹೊಲ ಮಾತನಾಡಿ ಶೇಕಡ 90ಕ್ಕಿಂತ ಹೆಚ್ಚು ಜನಸಾಮಾನ್ಯರನ್ನು ಜೆಸಿಬಿ ಪಕ್ಷಗಳು ನಿರ್ಲಕ್ಷಕ್ಕೆ ಈಡು ಮಾಡಿವೆ. ಆದರೆ ಆಮ್ ಆದ್ಮಿ ಪಕ್ಷ ಜನಸಾಮಾನ್ಯರನ್ನು ರಾಜಕೀಯಕ್ಕೆ ತರಲು ವೇದಿಕೆ ನಿರ್ಮಿಸಿದೆ ಆ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ದೆಹಲಿ ಮತ್ತು ಪಂಜಾಬ್ ನಲ್ಲಿ ನಡೆದ ಕ್ರಾಂತಿ ಈಗ ಗಂಗಾವತಿಯಲ್ಲಿ ಮತ್ತು ಕರ್ನಾಟಕದಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಡೆಯಬೇಕಿದೆ. ಜನಸಾಮಾನ್ಯರ ಎಲ್ಲ ಸಮಸ್ಯೆಗಳಿಗೆ ಪೊರಕೆ ಒಂದೆ ಪರಿಹಾರ , ನಿಮ್ಮೆಲ್ಲರ ಸಹಕಾರ ಮತ್ತು ಪ್ರಾಮಾಣಿಕ ರಾಜಕಾರಣದ ಬೆಂಬಲದಿಂದಾಗಿ ಆಮ್ ಆದ್ಮಿ ಪಕ್ಷ ಗಂಗಾವತಿಯಲ್ಲಿ ಅಭೂತಪೂರ್ವ ಜಯ ಸಾಧಿಸಲಿದೆ, ಆ ಜಯಮಾಲೆ ನಿಮ್ಮೆಲ್ಲರಿಗೂ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಂಪಣ್ಣ ಕಮತರ, ಶರಣಪ್ಪ ಕಸಕಂಡಿ, ಬಸವರಾಜ ಜಿಗಳಿ ಸೇರಿದಂತೆ ನೂರಾರು ಕಾರ್ಯಕರ್ತರು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಗೊಳಿಸಿದರು.

Prajavikshane

Chandru R Bhanapaur

Leave a Reply

error: Content is protected !!