ಮುದಗಲ್ಲ :-ಔಷಧಿ ಸಿಂಪರಣೆ ಮಾಡುವಾಗ ರೈತರು ಜಾಗೃತರಾಗಿರಿ..
ಮುದಗಲ್: ಹೊಲಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಔಷಧಿ ಸಿಂಪರಣೆ ಮಾಡುವ ವೇಳೆ ಜಾಗೃತರಾಗಿದ್ದು, ಆರೋಗ್ಯ ಕಾಪಡಿಕೊಳ್ಳಬೇಕೆಂದು ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ರವಿ ಕುಮಾರ ಹೇಳಿದರು.
ಸಮೀಪದ ಆನೆಹೊಸೂರು ಗ್ರಾಮದಲ್ಲಿ ಇಂಸೆಕ್ಟಯಿಸೈಡ್ ಇಂಡಿಯಾ ಲಿಮಿಟೆಡ್ ದಿಂದ ಜರುಗಿದ ರೈತರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಷಕಾರಿ ಔಷಧ ಸಿಂಪಡಿಸುವ ವೇಳೆ ಕೈಗಳಿ ಗ್ಲೌಸ್, ಬಾಯಿಗೆ ಮಾಸ್ಕ್ ಹಾಕಿಕೊಳ್ಳಬೇಕು.ಔಷಧ ಸಿಂಪರಣೆ ನಂತರ ಸ್ವಚ್ಛವಾಗಿ ಕೈ ತೊಳೆದು ಕೊಳ್ಳಬೇಕು. ಮಧ್ಯೆಪಾನ ಮಾಡಿ ಔಷಧ ಸಿಂಪರಣೆ ಮಾಡಲು ಹೋಗಬೇಡಿ ಎಂದರು.
ಆನೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗದ್ದೆಪ್ಪ ಸುಗೂರ,ಲಕ್ಷ್ಮೀ ಟ್ರೇಡರ್ ಶರಣಗೌಡ ಮಾಲೀ ಪಾಟೀಲ,ಬಸವೇಶ್ವರ ಆಗ್ರೋ ಮಾಲೀಕರ ದೊಡ್ಡನಗೌಡ ಮಾಲಿ ಪಾಟೀಲ, ಕೆಡಿಪಿ ಸದಸ್ಯ ಶರಣಪ್ಪ ಕಟ್ಟಗಿ, ಶಾಂತರಾಜು ಇದ್ದರು.
ವರದಿ:- ಮಂಜುನಾಥ ಕುಂಬಾರ..
