You are currently viewing LOCAL NEWS : ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಹೆಸರು ಬೀಜ ವಿತರಣೆಗೆ ದಸ್ತಾನು : ರೈತ ಮುಖಂಡರ ಆರೋಪ!

LOCAL NEWS : ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಹೆಸರು ಬೀಜ ವಿತರಣೆಗೆ ದಸ್ತಾನು : ರೈತ ಮುಖಂಡರ ಆರೋಪ!

LOCAL NEWS : ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಹೆಸರು ಬೀಜ ವಿತರಣೆಗೆ ದಸ್ತಾನು : ರೈತ ಮುಖಂಡರ ಆರೋಪ!

PV ನ್ಯೂಸ್ ಡಿಜಿಟಲ್ :

ಕುಕನೂರು, ಮೇ 21 : ಮುಂಗಾರು ಹಂಗಾಮು ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಇಲ್ಲಿನ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ (RSK) ರೈತರಿಗೆ ವಿತರಿಸಲು ಕಳಪೆ ಗುಣಮಟ್ಟದ ಹೆಸರು ಬೀಜಗಳನ್ನು ದಾಸ್ತಾನು ಮಾಡಿರುವುದನ್ನು ಖಂಡಿಸಿ ಸ್ಥಳೀಯ ರೈತ ಮುಖಂಡ ದೇವಪ್ಪ ಸೋಬಾನಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ಈ ಬಗ್ಗೆ ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಮುಂಗಾರು ಗಳ ಹೆಸರು ಮತ್ತು ತೊಗರೆಯನ್ನ ವಿತರಣೆ ಮಾಡುವುದಕ್ಕಾಗಿ ಸಂಗ್ರಹಣೆ ಮಾಡಿದ್ದ 2,400 ಕೆಜಿ ಹೆಸರು ಬೀಜಗಳು ಕಳಪೆ ಗುಣಮಟ್ಟದಾಗಿದೆ ಎಂದು ಕುಕನೂರು ತಾಲೂಕಿನ ರೈತ ಮುಖಂಡರು ಖಂಡಿಸಿ ಪ್ರತಿರೋಧ ವ್ಯಕ್ತಪಡಿಸಿದರು.

​ಕೀಟಬಾಧೆ, ಧೂಳು ಮಿಶ್ರಿತ ಬೀಜಗಳು!

​ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನೂರಾರು ಚೀಲ ಹೆಸರು ಬೀಜಗಳು ಪೂರೈಕೆಯಾಗಿವೆ. ಆದರೆ, ವಿತರಣೆಗೆ ಮುನ್ನ ಬೀಜಗಳ ಗುಣಮಟ್ಟವನ್ನು ಪರಿಶೀಲಿಸಿದ ರೈತರಿಗೆ ತೀವ್ರ ನಿರಾಶೆಯಾಗಿದೆ ಎಂದು ಹೇಳಬಹುದು.

​​”ಈ ಬೀಜಗಳನ್ನು ಬಿತ್ತಿದರೆ ಮೊಳಕೆಯೊಡೆಯುವ ಗ್ಯಾರಂಟಿ ಇಲ್ಲ. ಒಂದು ವೇಳೆ ಮೊಳಕೆ ಬಂದರೂ ರೋಗಬಾಧೆ ಗ್ಯಾರಂಟಿ. ಕಷ್ಟಪಟ್ಟು ಭೂಮಿ ಹದಗೊಳಿಸಿದ ನಮಗೆ ಅಧಿಕಾರಿಗಳು ಇಂತಹ ಕಳಪೆ ಬೀಜ ನೀಡಿ ಕೈತೊಳೆದುಕೊಳ್ಳಲು ನೋಡುತ್ತಿದ್ದಾರೆ.”

— ಶರಣಪ್ಪ ಚಂಡೂರ, ಸ್ಥಳೀಯ ಪ್ರಗತಿಪರ ರೈತ.

 

​   “ಬೀಜಗಳ ಗುಣಮಟ್ಟದ ಕುರಿತು ರೈತರು ಆಕ್ಷೇಪ ಎತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು, ಬೀಜಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರೈತರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ, ಶೀಘ್ರದಲ್ಲೇ ಪರ್ಯಾಯ ಗುಣಮಟ್ಟದ ಬೀಜಗಳನ್ನು ವ್ಯವಸ್ಥೆ ಮಾಡಲಾಗುವುದು” 

:- ಪ್ರಮೋದ್ ಕುಮಾರ್ ತುಂಬಳ್, ಸಹಾಯಕ ನಿರ್ದೇಶಕ,

ಕೃಷಿ ಇಲಾಖೆ ಯಲಬುರ್ಗಾ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ದಿವಟರ, ಈಶಪ್ಪ ಶಬರದ, ಬಸವರಾಜ ಇಬೇರಿ, ದೊಡ್ಡ ಶರಣಪ್ಪ ಚಂಡೂರ, ಎಲ್ಲಪ್ಪ ಕಲಾಲ್, ಸೇರಿದಂತೆ ರೈತ ಮುಖಂಡರು ಇತರರು ಉಪಸ್ಥಿತರಿದ್ದರು.

Leave a Reply

error: Content is protected !!