ಮುದಗಲ್ಲ ವರದಿ..
ಶ್ರೀ ಸದ್ಗುರು ಸಿದ್ದಾರೂಢರ ಸ್ವಾಮಿ ಭಾವಚಿತ್ರ ಮೆರವಣಿಗೆ..

ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿಗಳ ಶಿಲಾ ಮೂತಿ೯ಯ ದ್ವಿತೀಯ ವಷ೯ದ ಆಚರಣೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು
ಮುದಗಲ್ಲ :ಸ್ಥಳೀಯ ಸಿದ್ದಾರೂಢ ದೇವಸ್ಥಾನ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಸಿದ್ಧಾರೂಢರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ಸಂಭ್ರಮದಿಂದ ಭಾನುವಾರ ಮೆರವಣಿಗೆ ಮಾಡಲಾಯಿತು.

ಸಹಜಾನಂದ ಮಹಾ ಸ್ವಾಮಿಗಳು ಮುಂಬಯಿ ಹಾಗೂ ಕೃಷ್ಣನಂದಾ ಮಹಾ ಸ್ವಾಮಿಗಳು ಜಮಖಂಡಿ
ಸಾನಿಧ್ಯದಲ್ಲಿ ನಡೆಯಿತು..

ಸಿದ್ಧಾರೂಢರ ಭಾವಚಿತ್ರವನ್ನು ಕುಂಭ, ಕಳಸ ಹೊತ್ತ ಮಹಿಳೆರೊಂದಿಗೆ, ಬಾಜಾ ಭಜಂತ್ರಿ ಮೂಲಕ ಮೆರವಣಿಗೆ ಮಾಡಲಾಯಿತು.

ಮಧ್ಯಾಹ್ನ ದೇವಸ್ಥಾನದಲ್ಲಿಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮುದಗಲ್ಲ ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿ ಸದ್ಬಕ್ತ ಮಂಡಳಿ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು..

ವರದಿ.. ಮಂಜುನಾಥ ಕುಂಬಾರ