ಕೊಪ್ಪಳ : ಅಂಜನಾದ್ರಿ ಬೆಟ್ಟ ಆಂಜನೇಯ ಸ್ವಾಮಿಯ ಜನ್ಮಸ್ಥಳ ಜಿಲ್ಲೆಯ ಅಭಿವೃದ್ದಿಗಾಗಿ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಹಾಗೂ ಅಂಜನ ಹಳ್ಳಿ ರಸ್ತೆಯಲ್ಲಿ ಇರುವ 72 ಎಕರೆ ಭೂಪ್ರದೇಶವನ್ನು ಶಾಸಕ ಜನಾರ್ಧನ ರೆಡ್ಡಿ ವೀಕ್ಷಣೆ ಮಾಡಿದರು. ಆಂಜನೇಯ ಭಕ್ತರಿಗೆ ವಸತಿ ನಿಲಯ, ಪ್ರಸಾದ ನಿಲಯ, ಪಾರ್ಕಿಂಗ್ ಗೆ ಸ್ಥಳ, ಸೇರಿದಂತೆ ಮೊದಲ ಹಂತದಲ್ಲಿ ಶಾಸಕರು ಜಮೀನು ವೀಕ್ಷಿಸಿದರು.
ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ 72 ಎಕರೆ ಭೂಪ್ರದೇಶ ವೀಕ್ಷಣೆ ನಡೆಸಿ ಭೂ ಸ್ವಾಧೀನಕ್ಕಾಗಿ ಮುಂದಿನ ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.