You are currently viewing BREAKING : ರಾಜ್ಯದಲ್ಲಿ ಮತ್ತೆ ಬಂದ್‌ ಶಾಕ್‌ : ನಾಳೆ  ಕರ್ನಾಟಕ ಬಂದ್‌..!

BREAKING : ರಾಜ್ಯದಲ್ಲಿ ಮತ್ತೆ ಬಂದ್‌ ಶಾಕ್‌ : ನಾಳೆ ಕರ್ನಾಟಕ ಬಂದ್‌..!

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಬಂದ್‌ ಶಾಕ್‌ ತಾಕಲಿದೆ. ಇದೀಗ ಕರ್ನಾಟಕ ಬಂದ್‌ಗೆ ಮುನ್ನವೇ ಬೆಂಗಳೂರು ಪೊಲೀಸರು ಇಂದು (ಗುರುವಾರ) ನಗರದಲ್ಲಿ ಭದ್ರತಾ ಕ್ರಮಗಳ ಭಾಗವಾಗಿ ಸೆ. 30 ರಂದು(ಶನಿವಾರ) ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಪಕ್ಕದ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ 2000 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ಅಹೋರಾತ್ರಿ ಪ್ರತಿಭಟನೆಗೆ ಕರೆ ನೀಡಿವೆ. ಹಾಗಾಗಿ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧವು ಶುಕ್ರವಾರ (ಸೆಪ್ಟೆಂಬರ್ 29) 12 AM ನಿಂದ ಪ್ರಾರಂಭವಾಗುತ್ತದೆ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ ತಿಳಿಸಿದ್ದಾರೆ. ಈ ನಡುವೆ ಕನ್ನಡ ಸಂಘಟನೆಗಳ ಸಂಘಟನೆಯಾದ ‘ಕನ್ನಡ ಒಕ್ಕೂಟ’ ಇದಕ್ಕೆ ಕಡಿವಾಣ ಹಾಕುವ ಕ್ರಮಗಳ ವಿರುದ್ಧ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮುಷ್ಕರದ ಅಂಗವಾಗಿ ನಗರದ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!