LOCAL EXPRESS : ವಿಶೇಷ ಚೇತನರ ಕ್ರೀಡಾಕೂಟ : ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಕ್ಕಿಹಳ್ಳಿ ತಾಂಡದ ಬಾಲಕಿ..!!

You are currently viewing LOCAL EXPRESS : ವಿಶೇಷ ಚೇತನರ ಕ್ರೀಡಾಕೂಟ : ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಕ್ಕಿಹಳ್ಳಿ ತಾಂಡದ ಬಾಲಕಿ..!!

ಕುಕನೂರು : ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲಾಯ ವಿದ್ಯಾರ್ಥಿನಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇಂದು ಕೊಪ್ಪಳದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಕುಕನೂರ ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆಯ ಪವಿತ್ರ ಕಾರಭಾರಿ ಎಂಬ ವಿದ್ಯಾರ್ಥಿನಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆಯ ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ಹರ್ಷ ತಂದಿದೆ.

ತಾಲೂಕಿನ ಕಕ್ಕಿಹಳ್ಳಿ ತಾಂಡಾದ ನಿವಾಸಿಯಾದ ವಿದ್ಯಾರ್ಥಿನಿ ಪವಿತ್ರ ಕಾರಭಾರಿ, ಕೈ ನ್ಯೂನತೆ ವಿಭಾಗದಲ್ಲಿ 100ಮೀ ಓಟದಲ್ಲಿ ಪ್ರಥಮ ಮತ್ತು ಗುಂಡು ಎಸೆತ ದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ವಿಶೇಷ ಸಾಧನೆ ಮಾಡಿದ್ದಾಳೆ ಎಂದು ಗವಿಸಿದ್ದೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾಜಕುಮಾರ ರಾಥೋಡ್ ಅವರು ಪ್ರಜಾವೀಕ್ಷಣೆಗೆ ತಿಳಿಸಿದ್ದಾರೆ.

“ಹಿಂದೆ ನಮ್ಮೂರಿನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದರು. ಅದೇ ರೀತಿ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಈ ವಿದ್ಯಾರ್ಥಿನಿ ಕೂಡ ರಾಜ್ಯಮಟ್ಟಿಗೆ ಆಯ್ಕೆಯಾಗಿ ವಿಶೇಷ ಸಾಧನೆಯನ್ನು ಮಾಡಿದ್ದಾಳೆ. ನಮ್ಮೂರಿನ ಮಕ್ಕಳು ಕ್ರೀಡಾಕೂಟದಲ್ಲಿ ಬಹಳ ವಿಶೇಷವಾಗಿ ಸಾಧನೆ ಮಾಡಿದ್ದು, ನಮಗೆಲ್ಲ ಸಂತಸ ತಂದಿದೆ” 

 :- ಯಮನೂರಪ್ಪ ಕಟ್ಟಿಮನಿ,

ಕಕ್ಕಿಹಳ್ಳಿ ತಾಂಡ, ಬಳಗೇರಿ ಗ್ರಾಮ ಪಂಚಾಯತ್ ಸದಸ್ಯ

Leave a Reply

error: Content is protected !!